Showing posts with label bird_survey. Show all posts
Showing posts with label bird_survey. Show all posts

Monday, September 11, 2023

"ನಮ್ಮೂರ ಪರಿಸರ" – ನಮ್ಮ ಗ್ರಾಮ ಪರಿಸರ. ಕುಣಿಗಲ್

 "ನಮ್ಮೂರ ಪರಿಸರ" – ನಮ್ಮ ಗ್ರಾಮ ಪರಿಸರ.

ನಮ್ಮ "ಮಧುರಿಮಾ" ಥಿಯೇಟರ್ ಮತ್ತು "ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ" ಕುಣಿಗಲ್ ನಗರದಲ್ಲಿ 2023 ಸೆಪ್ಟೆಂಬರ್ 10 ರಂದು ನಡೆಸಲಾಗಿದ್ದ ಒಂದು ವಿಭಿನ್ನ ಕಾರ್ಯಕ್ರಮ ನಮ್ಮ ಊರು ಮತ್ತು ನಮ್ಮ ಪರಿಸರವನ್ನು ಆಚರಿಸಲಾಯಿತು.
ಮಕ್ಕಳನ್ನು ಪ್ರಕೃತಿಯ ಸಂಪರ್ಕಕ್ಕೆ ತಂದು ಪಕ್ಷಿ ರಕ್ಷಣೆ, ಚಿಟ್ಟೆಗಳು, ಮತ್ತು ಪರಿಸರದಲ್ಲಿ ಅವುಗಳ ಮುಖ್ಯ ಪಾತ್ರಗಳ ಬಗ್ಗೆ ಮಹತ್ವದ ವಿಚಾರ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿತ್ತು

ಕುಣಿಗಲ್ ತಾಲೂಕಿನಲ್ಲಿರುವ 2ನೇ ತರಗತಿಯಿಂದ 10ನೇ ತರಗತಿಯ ವಯೋಮಿತ್ರ ಪ್ರದೇಶದ 40 ಮಕ್ಕಳು ಈ ಸಂಭ್ರಮಕರ ಕಾರ್ಯಕ್ರಮಕ್ಕೆ ಉತ್ಸಾಹದಿಂದ ನಮೂದಿಸಿ ಈ ಅನನ್ಯ ಅನುಭವವನ್ನು ತುಂಬಾ ಆನಂದಿಸಿದರು.

ಮಕ್ಕಳು ಈ ಶಿಕ್ಷಣಕ್ಕೆ ಮತ್ತು ಪ್ರಕೃತಿಗೆ ಮೀಸಲಾದ ಈ ಕಾರ್ಯಕ್ರಮವನ್ನು ತುಂಬಾ ಆನಂದಿಸಿದ್ದು ಹಾಗು ಇದರ ಬಗ್ಗೆ ಹೆಚ್ಚು ಹೆಚ್ಚು ಪ್ರಶ್ನೆ ಕೇಳಿ ಪ್ರಕೃತಿ ಮಡಿಲಲ್ಲಿ ಆನಂದಿಸಿದ ರೀತಿ ನಮಗೂ ಬೆರಗು ನೀಡಿತ್ತು.. ಇಂತಹ ಪ್ರಯತ್ನಗಳು ಇಂದಿನ ಯುವ ತಲೆಮಾರಿಗೆ ಅತಿ ಅಗತ್ಯ ಪರಿಸರ ಮತ್ತು ಅದರ ಸಂರಕ್ಷಣೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ನಡೆಸುತ್ತವೆ, ಕೊನೆಗೂ ಹೆಚ್ಚಿನ ಸಾಕ್ಷರತೆಗೆ ಸಹಕರಿಸುತ್ತವೆ,
ಬರಿ ಕ್ಲಾಸ್ ರೂಮ್ ನಲ್ಲಿ ಕುಳಿತು ಪಕ್ಷಿ, ಗಿಡ ಮರ , ಚಿಟ್ಟೆ ಪ್ರಾಣಿಗಳ ಬಗ್ಗೆ ತೋರಿಸುವುದಲ್ಲ, ಮಕ್ಕಳಿಗೆ ಪರಿಸರದ ಬಗ್ಗೆ ಹೆಚ್ಚಿನ ಅರಿವು ಮೂಡಬೇಕು ಎಂದರೆ ಹೊರಗೆ ಇಂತಹ ಪರಿಸರದಲ್ಲಿ ನೆಡೆದಾಡಿ ಓಡಾಡಿ ಅನುಭವಿಸಿ ತಿಳಿದು ಕೊಳ್ಳ ಬೇಕು..

ನನ್ನ ಬಾಲ್ಯ ಸ್ನೇಹಿತ ಚಂದ್ರಮೌಳಿ 'ಮಧುರಿಮಾ ಥಿಯೇಟರ್' ನಲ್ಲಿ ಚಿಕ್ಕ ಮಕ್ಕಳಿಗಾಗಿ ರಂಗಶಿಬಿರ ಮತ್ತು ಇನ್ನು ಅನೇಕ ಕಾರ್ಯಕ್ರಮಗಳನ್ನು ಆಯೋಜಿ ಯಶಸ್ವಿ ಆಗಿದ್ದರೆ.
ಒಮ್ಮೆ ಇದರ ಬಗ್ಗೆ ಮಾತನಾಡುತ್ತ, ನನ್ನ ಹತ್ತಿರ ಒಂದು ಪ್ರಸ್ತಾಪ ಇಟ್ಟರು.. ನಾವೇಕೆ ಕುಣಿಗಲ್ ನಲ್ಲಿ ನೀನು ಆಯೋಜಿಸುವ ಪರಿಸರ, ಪಕ್ಷಿ ವೀಕ್ಷಣೆ ಕಾರ್ಯಕಮ ಮಾಡಬಾರದು ಎಂದು , ನಾನು ಹಿಂದೆ ಮುಂದೆ ನೋಡದೆ ತಕ್ಷಣವೇ ಒಪ್ಪಿಗೆ ನೀಡಿದ್ದೆ,, ಕಾರಣ ಕುಣಿಗಲ್ ನನ್ನ ಹುಟ್ಟುಸ್ಥಳವೂ ಆಗಿದೆ, ಹತ್ತನೇ ತರಗತಿಯವರೆಗೂ ನಾನು ಇಲ್ಲಿ ಅಧ್ಯಯನ ಮಾಡಿದ್ದೇನೆ. ನಾನು ಆಗಾಗ ಗ್ರಾಮೀಣ ಮಕ್ಕಳಿಗೆ ಪಕ್ಷಿ ಮತ್ತು ಪ್ರಕೃತಿಶಿಬಿರ ನಡೆಸುತ್ತೇನೆ, ಆದ್ದರಿಂದ ಈ ಅವಕಾಶ ಬಂದಾಗ ನಾನು ನನ್ನ ಸಹಮತ ನೀಡುವುದರಲ್ಲಿ ಸಂದೇಹವಿರಲಿಲ್ಲ

ನಾವು ಶೀಘ್ರದಲ್ಲೇ ದಿನಾಂಕವನ್ನು ಹೊಂದಿಸಿ, ಮಕ್ಕಳನ್ನು ಪ್ರಕೃತಿಯ ಸಂಪರ್ಕಕ್ಕೆ ಸಹಯೋಗ ಮಾಡಲು ಅಗತ್ಯ ವಿರುವ ಸಿದ್ಧತೆ ಮಾಡಿಕೊಳ್ಳಲು ಶುರುಮಾಡಿದೆವು..
ನಾನು ನಮಗೆ ಬೇಕಾದ ಸಹಾಯಕ್ಕಾಗಿ ನಮ್ಮ ಬೆಂಗಳೂರು ಪಕ್ಷಿ ಸಂಚಾಲನಾ ಗುಂಪಿಗೆ ನನ್ನ ಉತ್ಸಾಹವನ್ನು ಹೇಳಿದ ತಕ್ಷಣ ನಮ್ಮ ಟೀಮ್ ನ ವರಪ್ರಸಾದ್ , ಶಿವಂ, ವಿಜಯರಾಣಿ, ಮುನಿಷ್ ಗೌಡ, ರಕ್ಷಾ, ಅನುಪಮ, ಸೂರಿ ಮತ್ತು ನನ್ನ 12 ವರ್ಷದ ಮಗ ಪ್ರಣವ್ ಸಹ ಒಪ್ಪಿಗೆ ಸೂಚಿ ನಮ್ಮ ಜೊತೆ ಕೈಜೋಡಿಸಲು ಅನುವಾದರು.

ವಿಸ್ತಾರವಾದ ಸಿದ್ಧತೆಯೊಡನೆ, ನಾವು 2023 ಸೆಪ್ಟೆಂಬರ್ 10 ರಂದು ಬೆಳಿಗ್ಗೆಯ ಸಮಯಕ್ಕೆ ಈ ಕಾರ್ಯಕ್ರಮವನ್ನು ಮಾಡಲು ನಿರ್ಧರಿಸಿದ್ದೆವು.

"ನಮ್ಮ ಕುಣಿಗಲ್ . ಹತ್ತಿರದ ಪ್ರಕೃತಿಯ ವಿವಿಧತೆಯನ್ನು ಮತ್ತು ಪಕ್ಷಿ ಜೀವನವನ್ನು ಅನ್ವೇಷಿಸಲು . ನಾನು ಬೇಗುರು ಕೆರೆಗೆ ವೀಕ್ಷಿಸಲು ನಿರ್ಧರಿಸಿದೆವು , ಏಕೆಂದರೆ ಹಿಂದಿನ ಶಿಶಿರದಲ್ಲಿ ನಾನು ಈ ಕೆರೆಯಲ್ಲಿ ಅನೇಕ ವಲಸೆ ಪಕ್ಷಿಗಳನ್ನು ಗಮನಿಸಿದ್ದೆ "

"10ನೇ ತಾರೀಖು, ಆದಿತ್ಯಾಸ್ತಮನ್ನು ಸ್ವಾಗತಿಸುವ ಕೆರೆಯ ಹತ್ತಿರ ನಾವು ಬೆಂಗಳೂರಿನಿಂದ 5:30 ಗಂಟೆಗೆ ಹೊರಟು, 6:30 ಗಂಟೆಗೆ ಬೇಗುರು ಕೆರೆಯ ಹತ್ತಿರ ಬಂದೆವು.
ಶುಭ್ರ ಬೆಳಗಿನ ಸಮಯ, ಮೋಡ ಮಳೆ ಇರಲಿಲ್ಲ ಮತ್ತು ನಾವು ಕೆರೆಯ ಸುತ್ತಲೂ ಅಲ್ಲಿನ ಅದ್ಭುತ ದೃಶ್ಯಗಳನ್ನು ನೋಡಲು ಅಣುವಾಗಿದ್ದೆವು,
ಕೆರೆ ಹತ್ತಿರ ಸಾಮಾನ್ಯ ಇಲ್ಲೇ ವಾಸಿಸುವ ಹಕ್ಕಿಗಳ ಚಲನ ವಲನ ನೋಡುತ್ತಾ ಅವುಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾ ಮುಂದೆ ಸಾಗಿದೆವು, ಅಷ್ಟರಲ್ಲಿ ಏರಿ ಮೇಲಿನಿಂದ ಪಕ್ಕದ ಹೊಲ ಮತ್ತೆ ವಿಸ್ತಾರವಾದ ಗದ್ದೆ ಗಮನಿಸುತ್ತಾ ಇರಬೇಕಾದರೆ ನಮ್ಮ ತಂಡದ ಮುನೀಶ್ . ಜಾಕಲ್ ಅಂದರೆ ನರಿಗಳ ಗುಂಪನ್ನು ಪತ್ತೆ ಮಾಡಿ ಹೇಳಿದರು.. ಅಬ್ಬಬ್ಬಾ ನರಿ ನೋಡಿ ತುಂಬಾ ದಿನ ಆಗಿತ್ತು, ಒಂದು ಪೂರ್ಣ ನರಿಗಳ ಕುಟುಂಬ ಅಲ್ಲಿ ಬೆಳಗಿನ ಎಳೆ ಬಿಸಿಲಿನಲ್ಲಿ ಆಟ ಆಡುತ್ತ ಇದ್ದವು ... ಇದರ ಅಂದವನ್ನು ಕಣ್ಣು ತುಂಬಿಸಿ, ವಿಡಿಯೋ ಮತ್ತು ಫೋಟೋಗಳನ್ನು ಸೆರೆ ಹಿಡಿದು... ಮೂಢನೆ ಸಾಗಿದೇವು, ಅದರಲ್ಲಿ ಕೆಂಪು ಮುನಿಯಾ ಮತ್ತು ಇಬಿಸ್ ಪಕ್ಷಿಗಳ ಚಲನ ವಲನ ತುಂಬ ಖುಷಿ ಕೊಟ್ಟಿತು .


"ನಾವು 7:45 ಗಂಟೆಯವರೆಗೂ ನಮ್ಮ ಬೆಳಿಗ್ಗೆಯ ಪಕ್ಷಿ ವೀಕ್ಷಣೆ ಮುಕ್ತಾಯಗೊಳಿಸಿ, ಕುಣಿಗಲ್ಲಿ ನಲ್ಲಿ ಇರುವ 'ಹೋಟೆಲ್ ಪರಿಮಳ' ಎಂಬ ಶಾಕಾಹಾರಿ ಹೋಟೆಲ್ ಗೆ ಹೋದೆವು. ಇಲ್ಲಿ ನಮ್ಮತಂಡ ಬೆಣ್ಣೆ ಮಸಾಲ ದೋಸೆಯನ್ನು ಸ್ವಾದಿಸಿದೆವು. ಇದು ತುಂಬಾ ಹಳೆಯ ಹೋಟೆಲ್. ಈ ಹೋಟೆಲ್ ನೋಡುತ್ತಾ ಇಲ್ಲಿ ತಿಂಡಿ ತಿನ್ನುತ್ತಾ ನನ್ನ ಬಾಲ್ಯ ನೆನಪುಗಳ ಕಣ್ಣ ಮುಂದೆ ಬಂದವು.. ಈ ಹೋಟೆಲ್ ಇವಾಗ ಸ್ವಲ್ಪ ಬದಲಾಗಿದೆ...ಆಧುನಿಕತೆಗೆ ಇಂದಿನ ಸನ್ನಿವೇಶಕ್ಕೆ ಬದಲಾಗಿ ತನ್ನ ಅಂದ ಇನ್ನು ಹೆಚ್ಚಿಸಿ ಕೊಂಡಿದೆ. ಆದರೂ ಇಲ್ಲಿನ ಟೇಸ್ಟ್ ಮಾತ್ರ ಬದಲಾಗಿ ಇಲ್ಲ. ಅದೇ ಸ್ವಾದ... ಹೋಟೆಲ್ ಕಿಕ್ಕಿರಿದು ತುಂಬಿತ್ತು.


ಬೇಗ ಬೇಗ ತಿಂಡಿ ಮುಗಿಸಿ ಯೋಗ ಮಂದಿರ ಕ್ಕೆ ಬಂದೆವು... ಎಲ್ಲ ಮಕ್ಕಳು ಮೊದಲೇ ಸೇರಿ ಈ ಕಾರ್ಯಕ್ರಮಕ್ಕೆ ಎದಿರು ನೋಡುತ್ತಾ ಇದ್ದರು. ಸುಮಾರು ೪೦ ಜನ ಮಕ್ಕಳು ಎರಡನೇ ತರಗತಿ ಇಂದ ಹತ್ತನೇ ತರಗತಿ ವರಗೆ ಕುತೂಹಲದಿಂದ ಕಾಯುತ್ತ ಇದ್ದರು....
ನಮ್ಮ ಕಿರು ಪರಿಚಯ ಮುಗಿಸಿ ಮೊದಲ ಹಂತದ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟೆವು...
ಯೋಗ ಮಂದಿರ ದಿಂದ ಸುಮಾರು ೧.೫ km ದೂರ ಇರುವ "ಗಂಗೇನ ಹಳ್ಳಿ ಬಯಲು ಪ್ರದೇಶಕ್ಕೆ" ನಮ್ಮ ಗುಂಪು ಗುಂಪಾಗಿ ಹೊರಟಿತು... ಹೋಗುವ ದಾರಿ ಹೇಗೆ ಇತ್ತು ಎಂದರೆ ತೋಟ ಮತ್ತು ಹೊಲಗಳ ಮದ್ಯೆ ನಮ್ಮ ಪ್ರಯಾಣ ಸಾಗಿತ್ತು.. ದಾರಿ ಉದ್ದಕ್ಕೂ ಸಿಗುವ, ಪಕ್ಷಿಗಳ ಮತ್ತು ಚಿಟ್ಟೆಗಳ ಪರಿಚಯ ಮಾಡಿಕೊಳ್ಳುತ್ತ ಸಾಗಿತ್ತು ನಮ್ಮ ಪಯಣ.











ಕೆಲವು ಮಕ್ಕಳು ಮೊದಲನೇ ಸಲ ಬೈನಾಕ್ಯುಲರ್ ನೋಡುತ್ತಾ ಇದ್ದರು.. ತುಂಬ ಹತ್ತಿರದಿಂದ ನವಿಲು, ಬುಲ್ಬುಲ್, ಮೈನ ಇವುಗಳ ದರ್ಶನ ಮಾಡಿ ಖುಷಿ ಪಟ್ಟರು... ತಾರಾ ತರಹದ ಪ್ರಶ್ನೆಗಳನ್ನು ಕೇಳುತ್ತ ನೋಟ್ ಬುಕ್ ನಲ್ಲಿ ಅದರ ಬಗ್ಗೆ ಕೇಳಿ ಮಾಹಿತಿ ಬರೆದು ಕೊಳ್ಳುತ್ತಾ ಸಾಗಿದೆವು,, ಒಂದೂವರೆ ಕಿಲೋಮೀಟರ್ ಹೇಗೆ ಸಾಗಿತ್ತೋ ಗೊತ್ತಾಗಲಿಲ್ಲ ....ಬಣ್ಣ ಬಣ್ಣದ ಚಿಟ್ಟೆ, ಪಕ್ಷಿ, ನವಿಲು....ಹಾವು, ಹೂವ ಮತ್ತು ಗಿಡಗಳ ಪರಿಚಯ ಮಾಡಿಕೂಳ್ಳತ್ತ ಹೋದೆವು.
ಗಂಗೇನ ಹಳ್ಳಿ ಬಯಲು .. 
ಗಂಗ ಸಾಮ್ರಾಜ್ಯದ ಕುರುಹು ಗಳು ಇರುವ ಜಾಗ,, ಇಲ್ಲಿ ಇರುವ ದೇವಸ್ಥಾನ ಪೂರ್ತಿ ಬಿದ್ದು ಹೋಗಿದೆ.. ಆದರೂ ಇಲ್ಲಿನ ಜನ ಹೊಸ ದೇವಸ್ಥಾನ ಕಟ್ಟಿದ್ದಾರೆ.. ಸುಂದರ ಶಿವಲಿಂಗ ಮತ್ತು ಬಸವಣ್ಣ ಸಾವಿರಾರು ವರ್ಷಗಳ ಇತಿಹಾಸ ಹೇಳುತ್ತಾ ಇತ್ತು.. ಪಕ್ಕದಲ್ಲೇ ಇರುವ ವೀರಗಲ್ಲು ಮತ್ತು ಮಾಸ್ತಿ ಗಲ್ಲು ಇತಿಹಾಸದ ದರ್ಶನ ಮಾಡಿಸುತ್ತ ಇತ್ತು.. 
 ಇದರ ಜೊತೆಗೆ ಸುಂದರ ಹಳದಿ ಹೂವಿನ ಸೇವಂತಿಗೆ ಹೂವು ಇಲ್ಲಿನ ಪರಿಸರದ ಕಳೆ ಹೆಚ್ಚಿಸಿತ್ತು..

ದೇವಸ್ಥಾನದ ಪಕ್ಕದಲ್ಲೇ ಇರುವ ಮರದ ಕೆಳಗೆ ಮಕ್ಕಳಿಗೆ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.. ಹಾಗೆ ಇಲ್ಲಿನ ಸ್ಥಳ ಪರಿಚಯ ಮಾಡಿಕೊಂಡು ವಿಚಾರ ವಿನಿಮಯ ಮಾಡಿಕೊಂಡೆವು..

ತದನಂತರ ಮತ್ತೆ ಬಂದ ದಾರಿಯಲ್ಲೇ ಸಾಗಿ ಯೋಗ ಮಂದಿರಕ್ಕೆ ಬಂದೆವು..  ಮತ್ತೊಮೆ ಹೊಸ ಹೊಸ ಪಕ್ಷಿ ಮತ್ತು ಚಿಟ್ಟೆಗಳ ಪರಿಚಯ ಮಾಗೆ ಹಾವುಗಳ ಓಡಾಟ ಕಾಣ ಸಿಕ್ಕಿತ್ತು..
ಯೋಗ ಮಂದಿರದಲ್ಲಿ ಚಿಕ್ಕ ಮಕ್ಕಳಿಗೆ ಪಕ್ಷಿ ಮತ್ತು ಪರಿಸರದ ಬಗ್ಗೆ ಕೆಲವು ಗೇಮ್ಸ್ ಅನ್ನು ಆಡಿಸಿ . ಒಂದು ಪುಟ್ಟ ಪರಿಸರ ಪಕ್ಷಿಗಳ ಬಗ್ಗೆ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಇನ್ನು ಕುತೂಹಲ ಮೂಡಿಸುತ್ತು..
ಇದಾದ ನಂತರ ಈ ದಿನದ ನೆನಪಿಗಾಗಿ "ಕದಂಬ ವೃಕ್ಷ " ಸಸ್ಯ ನೆಟ್ಟು  ಈ ದಿನದ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಮೆರಗು ನೀಡಿತ್ತು..
ಚಿಕ್ಕ ಮತ್ತು ಚೊಕ್ಕ ಊಟ ನಂತರ,  ಇಂದಿಂದ ಕಾರ್ಯಕಮದ ಬಗ್ಗೆ ಅಭಿಪ್ರಾಯ ಮತ್ತು ವಂದನಾರ್ಪಣೆ ಇತ್ತು.


ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷರಾದ ಶ್ರೀ ರಾಮಣ್ಣ ಅವರ ಅರ್ಥಪೂರ್ಣ ಅನಿಸಿಕೆ ಮತ್ತು ಮಾತು ಮನಮುಟ್ಟುವಂತೆ ಇತ್ತು.. ಇವರು ನಿವೃತ್ತ ಕನ್ನಡ ಶಿಕ್ಷಕರು ಕೂಡ ... ಇವರ ಮಾತಿನಲ್ಲಿ ತೂಕ ಮತ್ತು ಅರ್ಥಪೂರ್ಣ ಅಭಿಪ್ರಾಯ ಎಲ್ಲರನ್ನು ಮತ್ತೆ ಯೋಚಿಸುವ ಹಾಗೆ ಮಾಡಿತ್ತು..



ಈ ಶಿಬಿರದಲ್ಲಿ ಪಾಲ್ಗೊಂಡಿದ್ದ ಕೆಲವು ಮಕ್ಕಳ ಅಭಿಪ್ರಾಯ " ಸಾಮಾನ್ಯ ವಾಗಿ ಭಾನುವಾರ ಟಿವಿ ಮತ್ತು ಮೊಬೈಲ್ ನೋಡಿಕೊಂಡು ಟೈಮ್ ವೇಸ್ಟ್ ಮಾಡುತ್ತ ಇದ್ದ ನಾವು , ಇಂದಿನ ಕಾರ್ಯಕ್ರಮದಲ್ಲಿ ಪರಿಸರ ಪಕ್ಷಿಗಳು ಮತ್ತು ಚಿಟ್ಟೆಗಳ ಪ್ರತ್ಯಕ್ಷ ದರ್ಶನ ಮಾಡಿ, ಎಂತಹ ಅಮೂಲ್ಯ ಸಮಯ ಸದುಪಯೋಗ ಪಡಿಸಿಕೊಂಡೆವು ಎಂದು ಹೇಳುವಾಗ " ನಮ್ಮ ಈ ಕಾರ್ಯಕ್ರಮದ ಸಾರ್ಥಕತೆ , ಯಶಸ್ವಿ ನಮ್ಮ ನ್ನು ಇನ್ನು ಎತ್ತರಕ್ಕೆ ಏರಿಸಿದ್ದೆವು ..
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಚಾಲಕರು ಅರುಣ್ ಅಣ್ಣ ತುಂಬ ಮುತುವರ್ಜಿ ವಹಿಸಿ, ಊಟ ತಿಂಡಿ ವ್ಯವಸ್ಥೆ ಅಚ್ಚು ಕಟ್ಟಾಗಿ ಮಾಡಿದ್ದರು ..

ಕೊನೆಯದಾಗಿ, "ಮಧುರಿಮಾ" ಥಿಯೇಟರ್" ನ ಶ್ರೀ ಯುತ ಚಂದ್ರಮೌಳಿ ಇಂತಹ ಹೊಸ ಹೊಸ ಪ್ರಯೋಗ ಗಳಿಗೆ ಮುನ್ನುಡಿ ಬರೆದು... ಇಷ್ಟು ಅಚ್ಚು ಕಟ್ಟಾಗಿ ನಿರ್ವಹಣೆ ಮಾಡಿದ್ದಕ್ಕೆ ನಮ್ಮ ಕಡೆ ಇಂದ ಒಂದು ದೊಡ್ಡ ಪ್ರಣಾಮಗಳು...


Special thanks to https://www.early-bird.in/. for Beautiful Kannada Posters and Flashcards and presentation


ಗುರುಪ್ರಸಾದ್ 
9886286681
guru.prasadkr@gmail.com

 Please watch Event photos here. 

Monday, August 7, 2023

ಜಿಮ್ ಕಾರ್ಬೆಟ್ --- ಕಾಡಿನ ನಿಜವಾದ ಅನುಭವ.. ಭಾಗ ೨

 ಜೂನ್ ೨೧ ೨೦೨೩ ಬುಧವಾರ ಬೆಳಿಗ್ಗೆ...

(ಮೊದಲ ಭಾಗ ಓದಲು - https://guruprsad.blogspot.com/2023/07/1.html)      

ರಾತ್ರಿ ಲೇಟ್ ಆಗಿ ಮಲಗಿದ್ದರು  ಸಹ ... ಸಮಯಕ್ಕೆ ಮುಂಚೆನೇ ಎಚ್ಚರ ಆಗಿತ್ತು ... ಅದಕ್ಕೆ ಕಾರಣ ಹೊಸ ಹೊಸ ಪಕ್ಷಿಗಳನ್ನು  ನೋಡ ಸಿಗುವ ಆನಂದ...  ಕೆಲವೊಂದು ಪಕ್ಷಿ ಪ್ರಭೇದ ಹಿಮಾಲಯದ ತಪ್ಪಲಿಗೆ ಮಾತ್ರ ಸೀಮಿತ.. ಇವುಗಳನ್ನು ಬೇರೆ ಕಡೆ ನೋಡುವ ಸೌಭಾಗ್ಯ ಸಿಗುವುದು ಕಮ್ಮಿಯೇ...  ಅದಕ್ಕೆ ನಮ್ಮ ಕುತೂಹಲ ಹೆಚ್ಚಾಗಿತ್ತು...

ಬೆಳಿಗ್ಗೆ ೫.೩೦ ಬೇಗ ಬೆಳಕು ಹರಿದಿತ್ತು... ಬೆಳಿಗ್ಗೆ ಎದ್ದ ಕೂಡಲೇ ಹೊರಗಡೆ ಬಂದು ನೋಡಿದೆ.... ಸುತ್ತಲು ಬೆಟ್ಟ ಗುಡ್ಡಗಳಿಂದ ಆವರಿಸಿದ ಕಾಡು..  ನಮ್ಮ ಫಾರೆಸ್ಟ್ ಗೆಸ್ಟ್ ಹೌಸ್ ಮುಂದೆ ವಿಶಾಲ ಜಾಗ... ಬಾನೆತ್ತರ ಬೆಳೆದು ನಿಂತ ಮರಗಳು. ಆಗಲೇ ಹಕ್ಕಿಗಳ ಚಿಲಿ ಪಿಲಿ  ನಿನಾದ ಜೋರಾಗಿ ಕೇಳುತ್ತ ಇತ್ತು..

ಬೇಗ ಬೇಗ ರೆಡಿ ಆಗಿ ಕ್ಯಾಮೆರಾ ಸಮೇತ ಹೊರಗಡೆ ಬಂದೆ.  ಅಷ್ಟರಲ್ಲಿ ಆಗಲೇ ನಮ್ಮ ಅಮರ್ ಚಂದ್ ಚಪಾತಿ ಹಾಗು ಪಲ್ಯ ರೆಡಿ ಮಾಡ್ತೇನೆ ತಿನ್ಕೊಂಡು ಹೊರಡೋಣ ಅಥವಾ ಕಟ್ಟಿಕೊಂಡು ಹೊರಡೋಣ ಅಂತ ಹೇಳಿ ರೆಡಿ ಮಾಡಲಿಕ್ಕೆ ಹೋದರು.  ಅಮರ್ ಚಂದ್ ಅಪ್ಪಟ ಉತ್ತರಾಖಂಡ್ ರಾಜ್ಯದ ದೇಸಿ ಹುಡುಗ. ಒಳ್ಳೆಯ ಕುಕ್  ನಾವು ಇದ್ದಷ್ಟು ದಿನ ನಮಗೆ ಬೇಕಾದ ಹಾಗೆ ರುಚಿ ರುಚಿ ಅಡುಗೆ ಮಾಡಿ ಕೊಡುತ್ತ ಇದ್ದರು. ಹಾಗೆ ಇವರ ಪಕ್ಷಿ ಬಗ್ಗೆ ಇರುವ ಜ್ಞಾನ ಕೂಡ ಅಪಾರ ..ಇದು ನಮಗೆ ಪಕ್ಷಿ ವೀಕ್ಷಣೆ ಹಾಗು ಸರ್ವೇ ಸಮಯದಲ್ಲಿ ನೆರವಾಯಿತು.

ಒಂದು ಕೈ ನಲ್ಲಿ ಟೀ ಹಿಡ್ಕೊಂಡು ಬೈನಾಕ್ಯುಲರ್ ಹೆಗಲಿಗೆ ಹಾಕಿಕೊಂಡು ಬೆಳಿಗ್ಗೆ ಬೆಳಿಗ್ಗೆನೇ ನಮ್ಮ ಗೆಸ್ಟ್ ಹೌಸ್ ಆವರಣದಲ್ಲಿ ಇದ್ದ ಪಕ್ಷಿಗಳ ಚಲನ ವಲನ ಗಮನಿಸಿ ರೆಕಾರ್ಡ್ ಮಾಡುವುದಕ್ಕೆ ಶುರು ಮಾಡಿದೆವು...

ಡಾಲರ್ ಬರ್ಡ್, ಕಲೀಜ್ ಫೆಸೆಂಟ್ , Grey-headed Woodpecker, red jungle Blue Whistling-Thrush, Greater Hornbill , paradise fly-catcher .. ಹೀಗೆ ಅನೇಕ ಹೊಸ ಹೊಸ ಮತ್ತು ನೋಡಿರುವ ಪಕ್ಷಿ ಹತ್ತಿರದಲ್ಲೇ ಹರಡುತ್ತಾ ತನ್ನ ಬೆಳಗಿನ ದಿನಚರಿ ಪ್ರಾಂಭಿಸಿತ್ತು..


Blue Whistling-Thrush

Rosy Starlings

Grey-headed Woodpecker
White-crested Laughingthrush
Red junglefowl







ಬರೀ ಸೌತ್ ಇಂಡಿಯಾ ಕಡೆ ಬರ್ಡಿಂಗ್ ಮಾಡಿದ್ದ ನನಗೆ .. ಇಲ್ಲಿನ ಪರಿಸರದ ಅಂದರೆ ಹಿಮಾಲಯ ಬೆಲ್ಟ್ ನಲ್ಲಿ ಮಾತ್ರ ಕಾಣಸಿಗುವ ಒಂದೊಂದು ಪಕ್ಷಿಗಳು ನಮಗೆ  ಹೊಸ ಹೊಸ ಪಕ್ಷಿ,  ಮೊದಲ ಸರಿ ನೋಡುವ ಅನುಭವ ... ಅಬ್ಬಾ ಕುತೂಹಲ. ಸಂತೋಷ, ಒಟ್ಟಿಗೆ  ಆಗ್ತಾ ಇತ್ತು.. ನಾನು ಮತ್ತು ನಮ್ಮ ಸಹಪಾಠಿ ಮುನೀಶ್ ಒಂದೊಂದು ಹಕ್ಕಿ ನೋಡಿ ಅದನ್ನು ರೆಕಾರ್ಡ್ ಮಾಡುತ್ತ ಖುಷಿ ಪಡ್ತಾ ಇದ್ವಿ.  

ಇನ್ನು ನಾವು ಬರ್ಡಿಂಗ್ ಟ್ರೇಲ್ ಅಂತ ಕಾಡಿಗೆ ಹೋಗಿಲ್ಲ ಇಲ್ಲೇ ಇಷ್ಟು ಬರ್ಡ್ಸ್ ನೋಡಲಿಕ್ಕೆ ಸಿಗುತ್ತಾ ಇದೆ ಇನ್ನು ಕಾಡಿನ ಒಳಗಡೆ?...  ಇನ್ನು ಏನೇನು ಸಿಗಬಹುದು ಎಂದು ಖುಷಿ ಇಂದ ಇದ್ವಿ.

ಅಷ್ಟರಲ್ಲಿ  ನಮ್ಮ ಅಮರ್ ಕೂಗಿ ಕರೆದ ಪರೋಟ , ಚಪಾತಿ ರೆಡಿ ಇದೆ ಅಂತ.  ಬೆಳಿಗ್ಗೆ ಇನ್ನು ೬-೩೦ ಇಷ್ಟು ಬೇಗ ತಿನ್ನೋದ ಅಥವಾ ಪ್ಯಾಕ್ ಮಾಡಿಕೊಂಡು ಹೋಗೋದ ಅಂತ ಯೋಚಿಸ್ತಾ ಇದ್ವಿ.. ಪ್ಯಾಕ್ ಆಗೋಲ್ಲ ಯಾಕೆ ಅಂದ್ರೆ ನಮ್ಮ bagpack ಜಾಸ್ತಿ ನೇ ಇದೆ , ಕ್ಯಾಮೆರಾ, ಬೈನಾಕ್ಯುಲರ್, water bottle, ಫೀಲ್ಡ್ ಗೈಡ್ .. ಇದರ ಜೊತೆ ತಿಂಡಿ ಕೂಡ ಅಂದರೆ ನೆಡೆಯಲು ತೊಂದರೆ ಆಗುತ್ತೆ ಅಂತ . ಒಂದೆರಡು ಚಪಾತಿ /ಪರೋಟ ಅಲ್ಲೇ ತಿಂದು ಹೊರಟೆವು .

ಬೆಳಗಿನ ಎಳೆ ಬಿಸಿಲು , ಮುಂಜಾನೆಯ ದಟ್ಟ ಮಂಜನ್ನು ಸೀಳಿ ನಿದಾನಕ್ಕೆ ಹೊರಚಾಚುತ್ತ ಇದ್ದ ರೀತಿ ಕಣ್ಣಿಗೆ ಮುದವನ್ನು ನೀಡಿತ್ತು. 


ತಂಪಾದ ಆಹ್ಲಾದಕರ ವಾತಾವರಣ.  ಮಳೆಗಾಲದ  ಮುಂಗಾರಿನ ದಿನಗಳು. ಮೋಡ ಅವರಿಸಿದ್ದರು ಸೆಕೆ ಮತ್ತು ಉಷ್ಣಾಂಶ ತುಸು ಹೆಚ್ಚೇ ಇತ್ತು.  

ಕಿರಿದಾದ ಕಣಿವೆ, ಸಣ್ಣಗೆ ಹರಿಯುವ ಝರಿ ...ಅದರಲ್ಲೇ ನೆಡೆದು ಕೊಂಡು ಧಾಟಿ ಸಾಗುತ್ತ ಇದ್ದ ನಮ್ಮ ಪಯಣ...  ಇದರ ಮಧ್ಯ ...ಜಿಂಕೆ ,,,ಸಾರಂಗ ಮುಂತಾದ ಕಾಡು ಪ್ರಾಣಿಗಳ ಚಲನ ವಲನ ಹತ್ತಿರದಿಂದ ಕಾಣುತ್ತ ಇತ್ತು...

ನಮ್ಮ ಜೊತೆ ಫಾರೆಸ್ಟ್ ಗಾರ್ಡ್ ಮತ್ತು RFO ಕೂಡ ಜೊತೆಗೆ ಇದ್ದರು..   ನೆಡೆದು ಕೊಂಡು ಹೋಗುತ್ತಾ ಅವರ ಜೊತೆ ಇಲ್ಲಿನ ಕಾಡು ಮತ್ತು ಪರಿಸರದ ಅವರ ಅನುಭವ . ಹೊಸ ಹೊಸ  ತರಹದ ಚಿಟ್ಟೆಗಳು, ಕಾಡಿನ ಮರ, ಗಿಡಳ ಪರಿಚಯ   ಎಲ್ಲವನ್ನು ರೆಕಾರ್ಡ್ ಮಾಡಿಕೊಳ್ಳುತ್ತಾ ಜಿಮ್ ಕಾರ್ಬೆಟ್ ಎನ್ನುವವ ಸುಂದರ ಕಾಡಿನ  ನೈಜ ಸೊಬಗನ್ನು ನೋಡುತ್ತಾ ಸಾಗುತ್ತಲಿತ್ತು ನಮ್ಮ ಪಯಣ..

ಅಷ್ಟರಲ್ಲಿ ನಮ್ಮ ಜೊತೆಗಾರ ಮುನೀಶ್ ಅವರು ಕೆಲವು ಅಪರೂಪದ ಪಕ್ಷಿಗಳ ಚಲನ ವಲನ ಗಮನಿಸಿ ಅಲ್ಲೇ ಸ್ವಲ್ಪ ಒಳಗೆ ಕಡಿದಾದ ಕಣಿವೆ ಇಳಿದು ಅದನ್ನು ಹುಡುಕಿ ಹೊರಟೆವು...

ಅಬ್ಬಾ ... ಹಸಿರು, ಹಳದಿ ಕಪ್ಪು ಬಣ್ಣದ ಲಾಂಗ್ ಟೈಲ್ಡ್ ಬ್ರಾಡ್ ಬಿಲ್(Long-tailed broadbill)

ಹಕ್ಕಿ ಮೊದಲ ಬಾರಿ ಕಂಡಾಗ ಅಲ್ಲೇ ಕೂಗಬೇಕು ಅನ್ನಿಸಿತು... ಅಷ್ಟು ಹತ್ತಿರ ದಿಂದ ಅವುಗಳ ಚಲನ ಆಟೋಟ. ನೋಡುತ್ತಾ ಮೈಮರೆತು ನಿಂತಿದ್ವಿ..


 ಅದಾಗಲೇ ಪಕ್ಷಿಗಳ ಲೋಕದಲ್ಲಿ ಮಿಂದು ತೇಲುತ್ತ ಹೊಸ ಹೊಸ ಪಕ್ಷಿಗಳ ಪರಿಚಯ ಮಾಡಿಕೊಳ್ಳುತ್ತ  ಒಂದು ಎಂಟರಿಂದ ಹತ್ತು km  ನೆಡೆದು ದಟ್ಟ ಕಾಡಿನ ನಡುವೆ ತುಂಬಾ ಒಳಗೆ ಬಂದಿದ್ವಿ...

ನಮ್ಮ ಜೊತೆ ತಂದಿದ್ದ ಬಿಸ್ಕಿತ್ತ್ ಮತ್ತು ನೀರು ಕುಡಿದು ಒಂದು ಕಡೆ ದಣಿವಾರಿಸಿಕೊಳ್ಳೋಣ ಎಂದು ಕುಳಿತೆವು.. 

ಅಷ್ಟರಲ್ಲಿ ನಮ್ಮ ಜೊತೆ ಬಂದಿದ್ದ ಫಾರೆಸ್ಟ್ ಗಾರ್ಡ್ "ಸಾರ್ ಅಲ್ಲೇ ನನಗೆ ಎರಡು ವರ್ಷದ ಕೆಳಗೆ ಹುಲಿ ದಾಳಿ ಮಾಡಿದ್ದೂ ಅಂತ ಜಾಗ ತೋರಿಸಿದ"  ನಾನು ನೀರು ಕುಡಿತಾ  ಇದ್ದವನು  ಚೆಕ್ ಅಂತ  ಎದ್ದು ಇವ ಏನು ಹೇಳುತ್ತಾ ಇದ್ದಾನೆ...ಏನಾದ್ರು ತಮಾಷೆ ಮಾಡ್ತಾ ಇದ್ದಾನ ಎಂದು ಅವನ ಪಕ್ಕ ಹೋಗಿ ಕುಳಿತು ನಿದಾನವಾಗಿ ಕೇಳಿದೆ...   ಅ ಪುಣ್ಯಾತ್ಮನ ಹುಲಿ ಜೊತೆಗಿನ ದಾಳಿ ಮತ್ತು ಸೆಣೆಸಾಟದ ಕತೆ ಕೇಳುತ್ತಾ  ಮೈ ಸಣ್ಣಗೆ ನಡುಗಲು ಶುರುವಾಯಿತು..

"ಅಲ್ಲಿ ಕೈ ತೋರಿಸಿ ... ಸಾರ್ ಅಲ್ಲಿ ನೋಡಿ ಅದೇ ಜಾಗ... ಅಲ್ಲಿ ಗುಡ್ಡದ ಮೇಲೆ ಕಾಣುತ್ತ ಇದೆ ಅಲ್ವ ಅದೇ ಜಾಗ ಸಾಬ್ ... ನಾವೆಲ್ಲಾ ಒಟ್ಟಿಗೆ ಬೀಟ್ ಗೆ ಬಂದಿದ್ದೆವು.. ನಮ್ಮ ಪಾಡಿಗೆ ನಾವು ಮಾತನಾಡುತ್ತ ಸಾಗುತ್ತ ಇದ್ದಾಗ ಅದೆಲ್ಲಿ ಇತ್ತೋ ಹುಲಿ ಎದುರು ಗಡೆ ಇಂದ ನೇರವಾಗಿ ನಮ್ಮ ಮೇಲೆ ಎಗರಿತು ಸಾರ್.. ಬರಿ ಒಂದು  ಹತ್ತು ಸೆಕೆಂಡ್..  ಅಷ್ಟೇ ನಾನು ನನ್ನ ಕೈನಲ್ಲಿ ಇದ್ದ ಕೋಲು ಅಡ್ಡ ವಾಗಿ ಹಿಡ್ಕೊಂಡು ಮುಂದೆ ತಳ್ಳಿದೆ... ನಮ್ಮ ಜೊತೆ ಬಂದೂಕು, ಕೋವಿ  ಎಲ್ಲಾ  ಇದ್ದರು ಏನು ಮಾಡಲು ಆಗಲಿಲ್ಲ.. ಅದು ಯಾವ ಮಾಯದಲ್ಲಿ ಬಂತೋ ಸಾರ್... ಬಂದಿದ್ದೆ ನನ್ನನ್ನು ಟಾರ್ಗೆಟ್ ಮಾಡಿತು..ಅಂತ ಆವಾಗಿನ ಹುಲಿ ಅಟ್ಯಾಕ್ ಅದ  ಫೋಟೋ  ತೋರಿಸುತ್ತಾ  ತನ್ನ ಮಾತು ಮುಂದುವರಿಸಿದ..   ಹಾಗೆ ಹೇಳುವಾಗ ಅವತ್ತಿನ ಆ ಭಯಾನಕ ದೃಶ್ಯ ಅವನ ಕಣ್ಣ ಮುಂದೆ ಬಂದಿರಬೇಕು.. ಇನ್ನು ಹೆದರಿಕೊಂಡೇ ಹೇಳುತ್ತಾ ಇದ್ದ ರೀತಿ ಅವನ ಮುಖ ದಲ್ಲಿ ಕಾಣಿಸುತ್ತ ಇತ್ತು..   " ಆಮೇಲೆ ನಮ್ಮ ಜೊತೆ ಇದ್ದ ಐದು ಜನ ಕೋಲು ಕಟ್ಟಿಗೆ ಇಂದ ಜೋರಾಗಿ ಗಲಾಟೆ ಮಾಡಿ ಅದರ ಮೇಲೆ ಎರಗಿದೆವು ಸಾರ್.  ಅಷ್ಟರಲ್ಲಿ ನನ್ನ ತಲೆ ಮತ್ತು ಭುಜಕ್ಕೆ ಅ ಹುಲಿ ತನ್ನ ಪಂಜಾ ಇಂದ ಹೊಡೆದು ಗಯಾ ಮಾಡಿತ್ತು... ಅಷ್ಟೇ ಸಾರ್ ನನಗೆ ಗೊತ್ತಾಗಿದ್ದು.. ಆಮೇಲೆ ಬರಿ ಅರ್ಧ ಜೀವ ಆಗಿತ್ತು ಅಂತ ಭಯದಿಂದಲೇ ಹೇಳಿದ್ದ.. ಇಲ್ಲಿ ಹುಲಿಗಳು ತುಂಬಾ ಭಯಂಕರ .. ಖತರ್ನಾಕ್  ಸರ್..ಯಾವಾಗ ಹೇಗೆ ಬಂದು ಮೇಲೆ ಎಗರುತ್ತವೋ ಗೊತ್ತಾಗೋದೇ ಇಲ್ಲ..  

ಅಷ್ಟರಲ್ಲಿ ಪಕ್ಕದಲ್ಲೇ ಇದ್ದ ಇನ್ನೊಬ್ಬ ಫಾರೆಸ್ಟ್  ಗಾರ್ಡ್ " ನಾನೇ ರೋಡ್ ತನಕ ಹೆಗಲ ಮೇಲೆ ಹಾಕಿಕೊಂಡು ಏಳು ಎಂಟು km  ತನಕ ಕರ್ಕೊಂಡ್  ಹೋಗಿ ಹಾಸ್ಪಿಟಲ್ ಗೆ ಸೇರಿಸಿದೆವು ಸಾರ್.. ಹಾಸ್ಪೆಟಲ್ ಕೂಡ ಇಲ್ಲಿಂದ ಮೂವತ್ತು KM ದೂರದ ಒಂದು ಊರಿನಲ್ಲಿ ಇದೆ ಅಂತ ಅವನ ಸ್ಟೋರಿ ಹೇಳ್ತಾ ಇದ್ದ.. ಹೆಂಗೋ ಬಚಾವ  ಅದ  ಇವನು ಅಂತ ಅವನನ್ನು ಛೇಡಿಸಿ .. ನನ್ನಿಂದಲೇ ಇವ ಬಚಾವ್ ಆಗಿದ್ದು ಅಂತ ಅವನನ್ನು ರೇಗಿಸುತ್ತಾ ಇದ್ದ...

ಇದರ ಜೊತೆ ಹುಲಿ ಅಟ್ಯಾಕ್ ಮಡಿದ ಮೋಹನ್ ದಾಸ್  (ಹೆಸರು ಬದಲಿಸಲಾಗಿದೆ) ಅವರ ರಕ್ತ ಸಿಕ್ತ  ಫೋಟೋ .  ಹಾಸ್ಪಿಟಲ್ ನಲ್ಲಿ ಟ್ರೀಟ್ಮೆಂಟ್ ಮಾಡುತ್ತ ಇದ್ದ ಫೋಟೋ ನೋಡಿ  ನನ್ನ ಬೆನ್ನಿನಲ್ಲಿ ಸಣ್ಣ ನೆಡುಕ ಶುರವಾಗಿತ್ತು...

ಅಲ್ಲ... ನಾನು ನಿದಾನಕ್ಕೆ ಅವರನನ್ನ ಕೇಳಿದೆ... ಅಲ್ಲಕಂಡ್ರಪ್ಪ ..  ಈ ವಿಷಯನ.. ಮತ್ತೆ ಸ್ಟೋರಿನ ಮೊದಲೇ ಯಾಕೆ ಹೇಳಲಿಲ್ಲ ?  ಇಷ್ಟು ದೂರ ಅಂದರೆ ಒಂದು ಎಂಟು km ಕಾಡಿನಲ್ಲಿ  ಕರ್ಕೊಂಡ್ ಬಂದು  ...ನಾವು ನೆಡೆದಾಡುತ್ತ  ಖುಷಿ ಪಟ್ಕೊಂಡ್ ಹಕ್ಕಿ ಪಕ್ಷಿ ಅಂತ  ಇಲ್ಲಿ ತನಕ ಏನು ಭಯ ಇಲ್ಲದಿರ ಬಂದಿದ್ದೇವೆ.. ಇವಾಗ ಹೇಳ್ತಾ ಇದ್ದಿರಲ್ಲ...ಅಂತ ಸರಿಯಾಗಿ ಬೈಕೊಂಡ್... ಅಣ್ಣ ಇನ್ನು ಮುಂದೆ ಏನು ನೋಡೋದು ಬೇಡ... ದಯವಿಟ್ಟು ವಾಪಾಸ್ ಬೇಗ  ಬೇಗ ನಮ್ಮ ಫಾರೆಸ್ಟ್  ಗೆಸ್ಟ್ ಹೌಸ್ ಕಡೆ ಹೋಗೋಣ ಎಂದು ನಾನು ಮತ್ತು ಮುನೀಶ್ ಎದ್ದು ನಿಂತೆವು...  ಅವರು ನಮ್ಮ ನೋಡಿ ನಗ್ತಾ ಇದ್ರು..

ದೇವರಾಣೆ...ಇಷ್ಟೆಲ್ಲ ಸೀನ್ ಇದೆ ಅಂತ ಮೊದಲೇ ಗೊತ್ತಿದ್ದರೆ ನಿಜವಾಗ್ಲೂ ಇಲ್ಲಿ ತನಕ ನೆಡ್ಕೊಂಡ್  ಬರೋ ಸಾಹಸ ಮಾಡ್ತಾ ಇರಲಿಲ್ಲ ಅಂತ ಕಾಣುತ್ತೆ... ಅಯ್ಯೋ ಪಾಪಿಗಾಳ  ಎಂದು ಕೊಂಡು ಬೇಗ ಬೇಗ ನಮ್ಮ ಗೆಸ್ಟ್ ಹೌಸ್ ಕಡೆ ಹೆಜ್ಜೆ ಹಾಗಿದೆವು...

ವಾಪಾಸ್ ಬರೋವಾಗ ಯಾವ ಬರ್ಡಿಂಗ್ ಕೂಡ ಇಲ್ಲ.. ಒಂದು ಜಿಂಕೆ ಅಥವಾ ಬಾರ್ಕಿಂಗ್ ಡೀರ್ ಕೂಗುವಿಕೆ ಕೇಳಿದರೆ ಸಾಕು..  ಹುಲಿ ನೇ ಕಣ್ಣಿಗೆ ಕಾಣಿಸುತ್ತ ಇತ್ತು...

ಅಂತೂ ಶಾರ್ಟ್ ಕಟ್ ರೂಟ್ ನಿಂದ ಫಾರೆಸ್ಟ್ ನ ಇನ್ನೊಂದ್ ಕಡೆ ಇಂದ ಬೇಗ ಬೇಗ ನೆಡೆದು ರೋಡ್ ನೋಡಿದಾಗ ಮನಸ್ಸಿಗೆ  ಸಮಾಧಾನ ಆಯಿತು .....

ಅಷ್ಟೇ ವಾಪಾಸ್ ಬಂದು  ಊಟ ಮಾಡುವ ವರೆಗೂ ಅದೇ ಗುಂಗಿನಲ್ಲಿ ಇದ್ದೆವು.. ಆಮೇಲೆ ಮದ್ಯಾನ ಮತ್ತೆ ನಮ್ಮ ಹೊಸ ಹುಡುಕಾಟ ಶುರು.. ಆದರೆ ಇವಾಗ ಮೇನ್ ರೋಡ್ ಸಮೀಪ ಕಾಲು ದಾರಿ ನಲ್ಲೇ  ನೆಡೆದು ಕೊಂಡು ಹೋಗುವ ಹಾಗೆ ನಮ್ಮ ಪ್ಲಾನ್ ಚೇಂಜ್ ಮಾಡಿಕೊಂಡೆವು.. :-) 

.... 

ಮುಂದುವರಿಯುವುದು...   

ಬೆಳಿಗ್ಗೆ ಸರ್ವೇ ನಲ್ಲಿ ಸಿಕ್ಕ ಅಪರೂಪದ ಹಿಮಾಲಯ ತಪ್ಪಲಿನ ಪಕ್ಷಿಗಳು...



Black-naped monarch  with Nesting 

Crested kingfisher

Crimson sunbird

Himalayan bulbul

Yellow-footed green pigeon


Scarlet minivet


Black bulbul


Asian barred owlet
Common green magpie

 





 





Wednesday, July 5, 2023

ಜಿಮ್ ಕಾರ್ಬೆಟ್ ಎನ್ನುವ ಕಾಡಿನೊಳಗಿನ ರೋಮಾಂಚಕ ಪಯಣ - ಭಾಗ 1

 





ಜಿಮ್ ಕಾರ್ಬೆಟ್.... ಹುಲಿಗಳ ಕಾಡು.... ದಟ್ಟಾರಣ್ಯ.... ಅತಿ ಹೆಚ್ಚು ಸಂಖ್ಯೆಯಲ್ಲಿ ಹುಲಿಗಳು ಇರುವ ಕಾಡು..

ಹಿಮಾಲಯದ ತಪ್ಪಲಿನ ವಿಶಾಲ ಜಾಗದಲ್ಲಿ ನೈನಿತಾಲ್ ಮತ್ತು ಭಿಮತಾಲ್ ಮುಂತಾದ ಬೆಟ್ಟ ಗಳಿಂದ ಆವೃತವಾದ

ದಂಡಕಾರಣ್ಯ ..... ನಮ್ಮ ಭಾರತದ ಮೊದಲ ಹಾಗು ತುಂಬ ಹಳೆಯ ನ್ಯಾಷನಲ್ ಪಾರ್ಕ್. ಜಿಮ್ ಕಾರ್ಬೆಟ್ ಕಾಡು ಸುಮಾರು ೧೩೧೮.೫೪ sq KM ಅಷ್ಟು ವಿಸ್ತಾರವಾಗಿದೆ...

ಇಂತಹ ಕಾಡಿಗೆ ಸಫಾರಿ ಮಾಡಲು ಅಲ್ಲಿಗೆ ಹೋಗಿ ಬರಲು ತುಂಬ ಸರಿ ಪ್ರಯತ್ನ ಪಟ್ಟಿದ್ದೆ. ಕಾರಣಾಂತರ ಗಳಿಂದ ಹೋಗಲು ಆಗಿರಲಿಲ್ಲ. ಕಳೆದ ತಿಂಗಳು ಜೂನ್ ನಲ್ಲಿ ಸಡನ್ ಆಗಿ ಹೋಗಿ ಬರಲು ಅವಕಾಶ ಸಿಕ್ಕಿತ್ತು !!!! ಅದು ಎಂತ ಅವಕಾಶ ಎನ್ನುತ್ತೀರಿ !!! ..... ಕಾಡಿನಲ್ಲಿ ಇಲ್ಲಿನ ಫಾರೆಸ್ಟ್ ಡಿಪಾರ್ಟ್ಮೆಂಟ್ ಆಯೋಜಿಸಿದ್ದ ಬರ್ಡ್ ಸರ್ವೇ ಮಾಡಲು.....

ಮೊದಲೇ ಹೋಗಬೇಕು ಎಂದು ಕಾಯುತ್ತ ಇದ್ದ ನನಗೆ ಇಂಥ ಒಳ್ಳೆ ಚಾನ್ಸ್ ...ಬಾಯಿಗೆ ಜಾಮೂನು ಬಿದ್ದ ಹಾಗೆ ಹಾಗಿತ್ತು.

ಕರ್ನಾಟಕದ ನಾಗರಹೊಳೆ, ತಮಿಳುನಾಡಿನ ಹೊಸೂರು ಹಾಗು ಸೇಲಂ ಕಾಡಿನಲ್ಲಿ ಮತ್ತು ಕೇರಳ ಕಾಡಿನಲ್ಲಿ ಬರ್ಡ್ ಸರ್ವೇ ಮಾಡಿ ಅನುಭವ ವಿದ್ದ ನನಗೆ ...ಈ ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ ಇನ್ನೊಂದು ರೀತಿ ಕುತೂಹಲ ಉಂಟು ಮಾಡಿತ್ತು...

ಕಡಿಮೆ ಸಮಯದಲ್ಲಿ ಹೋಗಬೇಕಾಗಿ ಇದ್ದದ್ದರಿಂದ . ಹೇಗೋ ಮ್ಯಾನೇಜ್ ಮಾಡಿ ಆಫೀಸ್ ನಿಂದ ಒಂದು ನಾಲ್ಕು ದಿನ ರಜೆ ಗಿಟ್ಟಿಸಿ....ಹೊರಡುವ ತಯಾರಿ ಮಾಡಿಕೊಂಡೆ ...

ಜೂನ್ ಇಪ್ಪತ್ತನೇ ತಾರೀಕು ನಾವು ಜಿಮ್ ಕಾರ್ಬೆಟ್ ಹೆಡ್ ಆಫೀಸ್ ರಾಮನಗರ್ ನಲ್ಲಿ ೧೦:೩೦ ಕ್ಕೆ ರಿಪೋರ್ಟ್ ಮಾಡಿಕೊಳ್ಳ ಬೇಕಿತ್ತು..

ಕಾಡಿನ ಮತ್ತು ಅಲ್ಲಿ ಇರಬೇಕಾಗುವ ಜಾಗ ಪರಿಸರ ಬಗ್ಗೆ ಸ್ವಲ್ಪ ಗೊತ್ತಿದ್ದರಿಂದ ಬೇಕಾಗಿರುವ ಬಟ್ಟೆ , ಬರೆ ಸ್ಲೀಪಿಂಗ್ ಬ್ಯಾಗ್, ಕ್ಯಾಮರಾ, ಬೈನಾಕ್ಯುಲರ್...ಎಲ್ಲ ರೆಡಿ ಮಾಡಿಕೊಂಡು ಜೂನ್ ೧೯ ನೇ ತಾರೀಖು ಸಂಜೆ ಬೆಂಗಳೂರು ಡೆಲ್ಲಿ ಫ್ಲೈಟ್ ಹತ್ತಿದೆವು.. ನನ್ನ ಜೊತೆ ಬೆಂಗಳೂರಿನಿಂದ ಮಧುಸುಧನ್, ಸುಧಾಕರ್ ಇಬ್ಬರು ಜೊತೆಯಾದರು..

ಡೆಲ್ಲಿ ಗೆ ಮಧ್ಯರಾತ್ರಿ ಹೊತ್ತಿಗೆ ತಲುಪಿ ಅಲ್ಲಿಂದ ಮೊದಲೇ ಬುಕ್ ಮಾಡಿದ್ದ ಕಾರ್ ನಲ್ಲಿ ಉತ್ತರಾಖಂಡ್ ನ ರಾಮನಗರ್ ಕಡೆ ಹೊರಟೆವು ...

ರಾಮನಗರ್ ತಲುಪುವ ಹೊತ್ತಿಗೆ ಬೆಳಿಗ್ಗೆ ಆರು ಘಂಟೆ ಆಗಿತ್ತು.. ಹೆಡ್ ಆಫೀಸ್ ಪಕ್ಕದಲ್ಲೇ ಒಂದು ಸಣ್ಣ ರೂಮ್ ಬುಕ್ ಮಾಡಿ ಫ್ರೆಶ್ ಆಗಿ . ಡೈರೆಕ್ಟರ್ ಆಫೀಸ್ ಗೆ ಹೋಗಿ ರಿಪೋರ್ಟ್ ಮಾಡಿಕೊಂಡೆವು... ಇಲ್ಲಿಗೆ ಬೆಂಗಳೂರಿನಿಂದ ಬಂದಿದ್ದ ಮುನೇಶ್ ಗೌಡ ಅವರು ಜೊತೆಯಾದರು. ಒಟ್ಟು ನಾವು ನಾಲ್ಕು ಜನ ಬೆಂಗಳೂರಿಗರು .... ನಮ್ಮ ಜೊತೆ ಬೇರೆ ಒಂದಿಬ್ಬರು ಕರ್ನಾಟಕ ಮತ್ತು ಬೆಂಗಳೂರಿನಿಂದ ಬಂದಿದ್ದರು ....



ಗುರುಪ್ರಸಾದ್, ಮುನೀಶ್ ಗೌಡ,ಮಧು,ಸುಧಾಕರ್. ನಮ್ಮ ಬೆಂಗಳೂರಿನಿಂದ ಬಂದಿದ್ದ ತಂಡ



ಭಾರತದ ಬೇರೆ ಬೇರೆ ಭಾಗಗಳಿಂದ ಬಂದಿದ್ದ birders ಮತ್ತು naturalist ಅವರನ್ನು ಪರಿಚಯ ಮಾಡಿಕೊಂಡು ಅಲ್ಲಿನ ಕಾಡು ಹಾಗೆ ನಮಗೆ ಯಾವ ಜಾಗಕ್ಕೆ ಹಾಕುತ್ತಾರೋ ಎಂಬ ಕುತೂಹಲದಿಂದ ಪಟ್ಟಿ ಬಿಡುಗಡೆ ಮಾಡುವುದನ್ನು ಕಾಯುತ್ತಿದ್ದೆವು.

ಮೊದಲೇ ಊಹಿಸಿಕೊಂಡ ಹಾಗೆ ನಾವು ನಾಲ್ವರಿಗೂ ಬೇರೆ ಬೇರೆ ಕಡೆಯ ಕ್ಯಾಂಪ್ ಗಳು ಸಿಕ್ಕಿದ್ದು, ಅದರಲ್ಲಿ ನನ್ನ ಅದೃಷ್ಟ ಏನೋ ಎಂಬಂತೆ ಮುನೀಶ್ ಜೊತೆ ಬರಬೇಕಾಗಿ ಇದ್ದ ಒಬ್ಬರು ಅವರ ಕ್ಯಾಂಪ್ ನಲ್ಲಿ ಬರದೇ ಇದ್ದಿದ್ದರಿಂದ .. ನಾನು ಅಲ್ಲಿನ ಆಫೀಸರ್ ಗೆ ಹೇಳಿ ಮುನೀಶ್ ಮತ್ತೆ ನಾನು ಒಂದೇ ಕ್ಯಾಂಪ್ ನಲ್ಲಿ ಇರುವ ಹಾಗೆ ಒಟ್ಟಿಗೆ ಹಾಕಿಸಿಕೊಂಡೆವು..

ಜಿಮ್ ಕಾರ್ಬೆಟ್ ವಲಯದ ಡೈರೆಕ್ಟರ್ Dr ಧೀರಜ್ ಪಾಂಡೆ ಮತ್ತು ಫಾರೆಸ್ಟ್ ಆಫೀಸರ್ ಗಳು ಕಾಡಿನ ಬಗ್ಗೆ ಮತ್ತು ಅಲ್ಲಿ ನಾವು ನೆಡೆದು ಕೊಳ್ಳುವ ಬಗ್ಗೆ ವಿವರಿಸಿ ಹೇಳುತ್ತಾ ಇದ್ದರು. ಅವರಿಗೆ ನಮ್ಮ ಸುರಕ್ಷತೆ ಮೊದಲ ಆದ್ಯತೆ ಆಗಿತ್ತು.. ಇಡೀ ಭಾರತದಲ್ಲಿ ಅತಿ ಹೆಚ್ಚು ಹುಲಿ ಮತ್ತು ಆನೆ ಇರುವ ಪ್ರದೇಶದಲ್ಲಿ ನಾವು ಕಾಲು ನೆಡಿಗೆ ಯಲ್ಲಿ ನೆಡೆದು ಬರ್ಡ್ ಸರ್ವೇ ಮಾಡಬೇಕಾಗಿ ಇತ್ತು.. ಇಂತಹ ದಟ್ಟ ಕಾಡಿನಲ್ಲಿ ಕೆಲವೇ ಕೆಲವು ಸೆಕೆಂಡ್ ಗಳ ಅಂತರದಲ್ಲಿ ಅನಾಹುತ ಆಗುವ ಸಂಭವ ಜಾಸ್ತಿ ಇತ್ತು... ಯಾಕೆ ಅಂದರೆ ಅಂತ ಬೌಗೋಳಿಕ ವಲದ ದಟ್ಟ ಅರಣ್ಯ ಇದು.. ಅದ ಕಾರಣ ಇಲ್ಲಿನ ಪರಿಸರ ಮತ್ತು ಕಾಡಿನ ಬಗ್ಗೆ ತುಂಬ ವಿವರವಾಗಿ ಮತ್ತು ನಾವು ನೆಡೆದು ಕೊಳ್ಳುವ ಸಂಪೂರ್ಣ ಮಾಹಿತಿ ಕೊಟ್ಟಿದ್ದರು. ಹಾಗೆ ಬರ್ಡ್ ಸರ್ವೇ ನೆಡೆಯುವ ರೀತಿ , ನಾವು collect ಮಾಡಬೇಕಾದ ಡೇಟಾ ಮುಂತಾದ ಮಾಹಿತಿ ವಿನಿಮಯ ಆಗಿ ನಾವು ನಮ್ಮ ನಿಯೋಜನೆ ಆಗಿದ್ದ ಕ್ಯಾಂಪ್ ಕಡೆ ಹೊರಡುವ ಸಮಯ ಮಧ್ಯಾಹ್ನ ಎರಡು ಘಂಟೆ ಆಗಿತ್ತು...

ಅಲ್ಲೇ ಕೊಟ್ಟಿದ್ದ ಊಟದ ಪ್ಯಾಕ್ ಅನ್ನು ತೆಗೆದು ಕೊಂಡು ನಮ್ಮ ಜೊತೆಗಾರರಿಗೆ ಬೈ ಹೇಳಿ ನಮಗಾಗಿ ಕಾಯುತ್ತ ಇದ್ದ ಓಪನ್ ಜಿಪ್ಸಿ ಕಡೆ ಹೊರಟೆವು...



ಇಲ್ಲಿಂದ ಶುರು ಆಗಿದ್ದೆ ಜಿಮ್ ಕಾರ್ಬೆಟ್ ಎನ್ನುವ ಕಾಡಿನೊಳಗಿನ ರೋಮಾಂಚಕ ಪಯಣ.....

ರಾಮ್ನಗರ್ ಇಂದ ನಮಗೆ ನಿಯೋಜನೆ ಗೊಂಡಿದ್ದ ಸ್ಥಳ ಸುಮಾರು 130 km ದೂರ ಇತ್ತು ...ಇದರ ಮುಕ್ಕಾಲೂ ಭಾಗ ಕಾಡಿನ ಒಳಗಿನಿಂದ ಹೋಗಬೇಕಾಗಿದ್ದರಿಂದ ನನ್ನ ಕುತೂಹಲ ..ಎದೆಬಡಿದ ಮೊದಲ ದಿನವೇ ಜಾಸ್ತಿ ಆಗಿತ್ತು....

ನಾರ್ತ್ ಈಸ್ಟ್ ಮತ್ತು ಈ ವಲದಲ್ಲಿ ಸಿಗುವ ಪಕ್ಷಿ ವೈವಿದ್ಯತೆ ಬೇರೆಯದೇ ಇರುತ್ತೆ.. ನಮಗೆ ಇಲ್ಲಿ ಕಾಣ ಸಿಗುವ ಪಕ್ಷಿ ಎಲ್ಲ ಹೊಸದು.. ಇದರ ಬಗ್ಗೆ ತಿಳಿದು ಕೊಳ್ಳಲು ನೋಡಲು ನನ್ನ ಮನಸ್ಸು ಹಾತೊರೆಯುತ್ತ ಇತ್ತು...

ನಾವು ಹೋಗಬೇಕಿದ್ದ ಜಾಗದ ಕಡೆ , ಅಲ್ಲೇ ಸುತ್ತ ಮುತ್ತ ಹತ್ತಿರ ವಿದ್ದ ಬೇರೆ ಬೇರೆ ಕ್ಯಾಂಪ್ ನಲ್ಲಿ ಇರುವ ಮಿತ್ರರು ನಮ್ಮ ಜೀಪ್ನಲ್ಲೇ ಜೊತೆ ಗೂಡಿದರು.. ಅದರಲ್ಲಿ ಒಂದಿಬ್ಬರು ಉತ್ತರಾಖಂಡ್ ರಾಜ್ಯದವರೇ ಆಗಿದ್ದರು ಅವರ ಮಾಹಿತಿ ಪ್ರಕಾರ ಹೋಗುವ ದಾರಿಯಲ್ಲೇ ಹುಲಿ ಮತ್ತು ಆನೆ ಮುಂತಾದ ಕಾಡು ಪ್ರಾಣಿ ಸಿಗುವ ಸಂಭವ ಜಾಸ್ತಿ ಇದೆ ಎಂದು ಹೇಳಿದಾಗ ... ನಾನು ಒಳಗೆ ಇಟ್ಟಿದ್ದ ಕ್ಯಾಮೆರಾ ತೆಗೆದು ಕೈನಲ್ಲೇ ಹಿಡಿದುಕೊಂಡೆ..








ಒಂದರ ಹಿಂದೆ ಒಂದಂತೆ ಮೂರು ಜೀಪು ಗಳು ಕಾಡಿನ ದಾರಿ ಸೀಳುತ್ತ ...ಧೂಳೆಬ್ಬಿಸುತ್ತ ಬರೋ ಎಂದು ಹೊರಟಿತು...






ಕಾಡಿನಲ್ಲಿ ಸಿಗುವ ಒಂದೊಂದು ಚೆಕ್ ಪೋಸ್ಟ್ ಅಲ್ಲಿ ಎಂಟ್ರಿ ಮಾಡುತ್ತ ಸುಂದರ ಕಾಡಿನ ಪರಿಸರದ ನೋಟ ಸವಿಯುತ್ತ ಓಪನ್ ಜಿಪ್ಸಿ ನಲ್ಲಿ ನಮ್ಮ ಪಯಣ ಸಾಗಿತ್ತು...

ದಾರಿಯಲ್ಲಿ ಹೋಗುತ್ತಾ ಇರಬೇಕಾದರೆ ನಮ್ಮ ಬರ್ಡ್ ಕೌಂಟ್ ಶುರು ಆಗಿತ್ತು.. ಆಗಲೇ ಕೆಲವು ಅಪರೂಪದ ಪಕ್ಷಿಗಳ ದರ್ಶನ ಆಗುತ್ತಾ ಇತ್ತು... ವಿಶಾಲ ಹುಲ್ಲು ಗಾವಲು....ಹಳ್ಳ ಕೊಳ್ಳಗಳಿಂದ ಕೂಡಿದ ರಸ್ತೆ.. ಮಧ್ಯ ಮಧ್ಯ ಸಿಗುವ ನದಿ ತೊರೆ ಗಳನ್ನ ಧಾಟಿ ನಮ್ಮ ಜೀಪು ಮುನ್ನುಗ್ಗುತ್ತ ಇತ್ತು... ದಾರಿಯಲ್ಲಿ ಸಿಗುವ ಕೆಲವು ಫಾರೆಸ್ಟ್ ಪಾಯಿಂಟ್ ಗಳಲ್ಲಿ ಅಲ್ಲಿ ಇಳಿಸ ಬೇಕಾದ ಸಹ ಪಯಣಿಗರನ್ನು ಇಳಿಸಿ .. ನಮ್ಮ ಜೀಪು ಮುಂದೆ ಸಾಗಿತು... ದಾರಿ ಉದ್ದಕ್ಕೂ ಅಲ್ಲಲ್ಲಿ ಕಾಣ ಸಿಗುತ್ತಾ ಇದ್ದ ಜಿಂಕೆ , ಕಡವೆ, ಸಾರಂಗ .....ನವಿಲಿನ ಕೂಗು .....ಪಕ್ಷಿಗಳ ಚಿಲಿಪಿಲಿ ಕಲರವ ....ಇವೆಲ್ಲವನ್ನೂ ಬೆರಗು ಕಣ್ಣಿನಿಂದ ನೋಡುತ್ತಾ ಸಾಗಿತ್ತು ನಮ್ಮ ಪಯಣ..

ಮಧ್ಯೆ ಒಂದು ಕಡೆ ಚೆಕ್ ಪೋಸ್ಟ್ ನಲ್ಲಿ ಎಲ್ಲ ಜೀಪುಗಳು ನಿಲ್ಲಿಸಿ ನಮಗೆ ಕೊಟ್ಟಿದ್ದ ಊಟದ ಪ್ಯಾಕ್ ಅನ್ನು (ಸ್ನ್ಯಾಕ್ ಪ್ಯಾಕ್) ತಿಂದು ನೀರು ಕುಡಿದು ..ನಮ್ಮ ಪ್ರಯಾಣ ಮುಂದುವರಿಸಿದೆವು...



ಕಾಡಿನ ಕಚ್ಚಾ ರಸ್ತೆ. ಬರಿ ಮಣ್ಣು ರೋಡು ಅದರಲ್ಲೂ ಒಂದರ ಹಿಂದೆ ಒಂದಂತೆ ಜೀಪು ಸಾಗುತ್ತ ಇರಬೇಕಾದರೆ ಬರುತಿದ್ದ ಧೂಳು ನಮ್ಮ ಮೈ ಕೈ ಮುಖ ಎಲ್ಲ ಕಡೆ ಆವರಿಸಿತ್ತು...ಸದ್ಯ ನನ್ನ ಕ್ಯಾಮೆರಾ ಗೆ ಡಸ್ಟ್ ಪ್ರೂಫ್ ಹೊದ್ದಿಸಿದ್ದೆ ...ಬಚಾವಾಗಿತ್ತು... :-)


ವಿಶಾಲ ಅರಣ್ಯ ....ಒಮ್ಮೆಮ್ಮೆ ಧಟ್ಟ ಕಾಡಿನ ಒಳಗೆ ...ಮರುಕ್ಷಣ ದೊಡ್ಡ ಹುಲ್ಲು ಗಾವಲಿನ ಬಯಲು... ಮುಂದೆ ದೊಡ್ಡ ಹಳ್ಳ ಮತ್ತೊಮ್ಮೆ ಕಡಿದಾದ ಬೆಟ್ಟ ಗುಡ್ಡ ಸಾಲು ......ಜಿಮ್ ಕಾರ್ಬೆಟ್ ಅನ್ನುವ ಕಾಡು ನಿದಾನವಾಗಿ ತನ್ನ ಸೌಂದರ್ಯ ತೋರಿಸುತ್ತ ಇತ್ತು..

ಆಗಲೇ ಸಂಜೆ ಐದು ಘಂಟೆ ಆಗಿದೆ ನಾವು ತಲುಪ ಬೇಕಾದ ಸ್ಥಳ ಇನ್ನು ತುಂಬ ದೂರ ಇತ್ತು... ಡ್ರೈವರ್ ಕೂಡ ಹೊಸಬ.. ನಮ್ಮದು ಓಪನ್ ಜಿಪ್ಸಿ ಬೇರೆ.. ಮೇಲೆ ನೋಡಿದರೇ ಮೋಡಗಳ ಸಾಲು ನಿದಾನಕ್ಕೆ ಆವರಿಸುತ್ತಾ ಇದ್ದೆ. ನನಗೆ ಇವಾಗ ಭಯ ಆಗುವುದಕ್ಕೆ ಶುರು ಆಯಿತು.. ನಾವು ನೆನೆದರೆ ಪರವಾಗಿಲ್ಲ ನಮ್ಮ ಕ್ಯಾಮೆರಾ ಗತಿ ಏನು ಎಂದು ಯೋಚನೆ ಶುರುವಾಯಿತು.. ಅಲ್ಲಿ ತನಕ ಸುಮ್ಮನೆ ಇದ್ದ ಮಳೆ ರಾಯ ಒಂದೇ ಸಮನೆ ಧೋ ಎಂದು ಭಾರಿಸುವುದಕ್ಕೆ ಶುರು ಮಾಡಿದ... ಸದ್ಯ ನಮ್ಮ ಡ್ರೈವರ್ ಇಳಿದು ಜಿಪ್ಸಿ ಮೇಲೆ ಇದ್ದ ಟಾರ್ಪಲ್ ಕವರ್ ಮಾಡಿ ಫುಲ್ ಪ್ಯಾಕ್ ಮಾಡಿದ.. ಆದರೂ ನನಗೆ ಭಯ ವಾಟರ್ ಪ್ರೂಫ್ ಕವರ್ ಇದ್ದರು ಕ್ಯಾಮೆರಾ ಮೇಲೆ ನೀರು ಬೀಳದೆ ಇರುವ ಹಾಗೆ ನೋಡಿಕೊಳ್ಳ ಬೇಕಾದ ಜವಾಬ್ದಾರಿ ನನ್ನ ಮೇಲೆ ಇತ್ತು.

ಅಲ್ಲಿ ಮಳೆ ಭಯಂಕರ .. ಬಂದರೆ ಒಂದೇ ಸಮನೆ ಜೋರಾಗಿ ಸುರಿಯುತ್ತದೆ .. ಟಾರ್ಪಲ್ ಒಳಗೆ ಇಂದ ನೀರು ಸೋರುತ್ತಾ ಇತ್ತು.. ಮುಂದೆ ಸಿಕ್ಕ ಒಂದು ಫಾರೆಸ್ಟ್ ಚೆಕ್ ಪಾಯಿಂಟ್ ನಲ್ಲಿ .. ಅಲ್ಲಿ ಇಳಿಯ ಬೇಕಿದ್ದ ಜನರನ್ನು ಇಳಿಸಿ .. ಕಾಡು ಬಿಟ್ಟು ನಮ್ಮ ಜೀಪು ಮೇನ್ ರೋಡ್ ಗೆ ಬಂದಿತು.. !!!!! ಆಗಲೇ ಒಂದು ಆಶ್ಚರ್ಯ ಘಟನೆ ಕಣ್ಣ ಮುಂದೆ ನಡೆದುಹೋಯಿತು!!!!... ನಮ್ಮ ಜೀಪ್ ನಲ್ಲಿ ಮುಂದೆ ಕುಳಿತಿದ್ದ ಇಬ್ಬರು ಅಲ್ಲಿ ನೋಡಿ ...ಅಲ್ಲಿ ಅಲ್ಲಿ,,,, ಎನ್ನುತ್ತ ಕೂಗಿ ಕೊಂಡರು ಅಷ್ಟೇ ... ಅಂತಹ ಬ್ಯುಸಿಯಾದ ರೋಡಿನಲ್ಲಿ .... ಒಂದು ಚಿರತೆ ಚಂಗೆಂದು ರೋಡಿನ ಮಧ್ಯದಿಂದ ಹಾರಿ ಇನ್ನೊಂದು ಕಡೆ ಹೋಯಿತು .... ನಾವು ಗಾಡಿಯನ್ನು ನಿಲ್ಲಿಸಿ ಜೋರಾಗಿ ಸುರಿಯುತ್ತ ಇದ್ದ ಮಳೆ ಲೆಕ್ಕಿಸದೇ ಇಳಿದು ನೋಡಿದೆವು ... ಅದು ಯಾವ ಮಾಯದಲ್ಲಿ ಎಲ್ಲಿ ಮರೆಯಾಗಿ ಹೋಯಿತೋ ಆ ಚಿರತೆ...... ಅಬ್ಭಾ ಅಂತ ಮಳೆಯಲ್ಲೂ ಮೈ ರೋಮಾಂಚನದ ಅನುಭವ..

ಅದೇ ಗುಂಗಿನಲ್ಲಿ ಸ್ವಲ್ಪ ದೂರ ಸಾಗುತ್ತ ಇರಬೇಕಾದರೆ ಮಳೆ ಸಂಪೂರ್ಣ ನಿಂತು ಹೋಯ್ತು .... ಜೀಪಿಗೆ ಹೊದಿಸಿದ್ದ ಟಾರ್ಪಲ್ ತೆಗೆದು ....ಸುತ್ತಲಿನ ಆ ತಂಪಾದ ಪರಿಸರ ನೋಡುತ್ತಾ ಮೋಡಗಳ ಮಧ್ಯೆ ಅವಾಗ ಅವಾಗ ಕಾಣಿಸುತ್ತ ಇದ್ದ ಸೂರ್ಯಾಸ್ತ ನೋಡುತ್ತಾ ನಮ್ಮ ಕ್ಯಾಂಪ್ ಯಾವಾಗ ಬರುತ್ತೋ ಎಂದು ಕಾಯುತ್ತ ಇದ್ದೇವು ..

ಸಂಜೆ ೭ ಘಂಟೆ ..ಇನ್ನು ಕತ್ತಲು ಆಗಿರಲಿಲ್ಲ... ಸುಂದರ ಪರಿಸರ ಬೆಟ್ಟ ಗುಡ್ಡಗಳ ಸಾಲು.. ಪಕ್ಕದಲ್ಲಿ ದೊಡ್ಡದಾದ ಕಣಿವೆ... ಕೆಳಗೆ ಹರಿಯುತ್ತ ಇದ್ದ ನೀರಿನ ಭೋರ್ಗರೆತದ ಸದ್ದು .... ಇವುಗಳನ್ನು ನೋಡುತ್ತಾ ಮುಂದಿನ ಸ್ಟಾಪ್ ನಮ್ಮದೇ ಎಂದು ಹೇಳಿದಾಗ .. ಆ ಕ್ಯಾಂಪ್ ಹೇಗೆ ಇರುತ್ತದೋ ಏನು ಕುತೂಹಲ ದಿಂದ ನಾನು ಮತ್ತು ಮುನೀಶ್ ಕಾಯುತ್ತಾ ಕುಳಿತಿದ್ದೆವು...

ರಾತ್ರಿ ೭:೩೦ ರ ಹೊತ್ತಿಗೆ ನಾವು ಇಳಿಯ ಬೇಕಾದ ಕ್ಯಾಂಪ್ ಬಂದೆ ಬಿಟ್ಟಿತು ...ಕಾಡಿನ ಮಧ್ಯೆ...ಒಂದು ಪುಟ್ಟ ಗುಡ್ಡ ದ ಮೇಲೆ ನಮ್ಮ ಕ್ಯಾಂಪ್ ಲೈಟ್ ಕಾಣಿಸಿತು ... ಅಲ್ಲಿಗೆ ಹೋಗಲು ಅಲ್ಲೇ ಹರಿಯುತ್ತ ಇದ್ದ ನದಿ ಧಾಟಿ ಮೇಲೆ ಹೋಗಬೇಕು.... ಅರೆ ಅರೆ .... ಆಗಲೇ ನನ್ನ ಮೈ ಪುಳಕ ಗೊಂಡು ರೋಮಾಂಚನ ಆಯಿತು... ನಮ್ಮ ಜೀಪು ಸಣ್ಣಗೆ ಹರಿಯುತ್ತ ಇದ್ದ ನದಿ ದಾಟಿ ಪುಟ್ಟ ಗುಡ್ಡ ಏರಿ ನಮ್ಮ ಕ್ಯಾಂಪ್ ಗೆ ತಂದು ಬಂದು ಬಿಟ್ಟಿತು.....






ದೊಡ್ಡದಾದ ಹೇಳೇ ಕಾಲದ ಬಂಗಲೆ ..ಸುತ್ತಲೂ ಕಾಡು ಮದ್ಯ ಈ ಕ್ಯಾಂಪ್. ಕ್ಯಾಂಪ್ ಸುತ್ತ ಸೋಲಾರ್ ತಂತಿ ಬೇಲಿ......ರಾತ್ರಿ ಬೆಳಗಿನಲ್ಲೇ ಅದನ್ನು ನೋಡಿ... ಮುಂದಿನ ಮೂರು ದಿನ ಸ್ವರ್ಗ ದಲ್ಲೇ ಇರುತ್ತೇವೇ ಎಂದು ಕೊಂಡು ನಮ್ಮ ನಮ್ಮ ಬ್ಯಾಗ್ ಇಳಿಸಿ ಒಳ ಹೋದೆವು ....

ಕಾಡಿನಲ್ಲಿನ ಆ ಏಳು ಘಂಟೆ ಪಯಣ.... ಎಲ್ಲ ತರದ ಅನುಭವ ಶುರುವಿನಲ್ಲೇ ಕೊಟ್ಟು.... ಜಿಮ್ ಕಾರ್ಬೆಟ್ ಎನ್ನುವ ದಟ್ಟ ಅರಣ್ಯದ ಬಗ್ಗೆ ನನಗೆ ಇದ್ದ ಕುತೂಹಲಕ್ಕೆ ದೊಡ್ಡ ಮುನ್ನುಡಿ ಬರೆದಿತ್ತು.....




(ಮುಂದುವರೆಯುವುದು ...........ನಿಜವಾದ ಮೈ ನೆವಿರೇಳಿಸುವ ರೋಚಕ ಅನುಭವ ಶುರುವಾಗುವುದೇ ಇಲ್ಲಿಂದ ..... :-)