Tuesday, October 22, 2019

ಚಿತ್ರಕೂಟ ಶಾಲೆಯ "ಚಿತ್ರ ಕಥಾ"






ಚಿತ್ರಕೂಟ ಶಾಲೆಯ "ಚಿತ್ರ ಕಥಾ"

ನಮಸ್ಕಾರ

ಚಿತ್ರಕೂಟ ಶಾಲೆಯ ಸ್ಕೂಲ್ ಡೇ ಕಾರ್ಯಕ್ರಮವು ಅತ್ಯದ್ಭುತವಾಗಿ ಮೂಡಿಬಂದಿತ್ತು..

ಚಿತ್ರಕೂಟ ಶಾಲೆಯು ಬೆಳೆದು ಬಂದ 15ವರ್ಷಗಳ ಮೆಲಕು ಇದನ್ನೇ ಥೀಮ್ ಆಗಿ ಇಟ್ಟುಕೊಂಡು "ಚಿತ್ರ ಕಥಾ" ಎಂಬುವ ಸ್ಕೂಲ್ ಡೇ ಕಾರ್ಯಕ್ರಮವು ಬಹಳ ಅದ್ದೂರಿ ತನದಿಂದ, ತುಂಬಾ ಅರ್ಥಗರ್ಭಿತವಾಗಿ ಯಶಸ್ವಿಯಾಗಿ ನೆರವೇರಿತು...

ನನಗೆ ಚಿತ್ರಕೂಟ ಶಾಲೆ ಇಷ್ಟವಾಗುವುದು ಇಂತಹ ಪ್ರಯೋಗಗಳಿಂದ... ನನ್ನ ಪ್ರತಿ ಬಾರಿ ಇಂತಹ ಅದ್ಭುತ ಕಾರ್ಯಕ್ರಮಗಳನ್ನು ಯಾವ ಕಾರಣದಿಂದಲೂ ಮಿಸ್ ಮಾಡಿಕೊಳ್ಳುವುದಿಲ್ಲ... ಇದನ್ನು ನಾನು ಒಂದು ರಂಗಪ್ರಯೋಗ ಎಂದರೂ ಕೂಡ ಅತಿಶಯೋಕ್ತಿಯಾಗಲಾರದು....

ನನ್ನ ಮಗ ಈ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಇದ್ದಾನೆ ಈ ಸ್ಕೂಲ್ ಡೇ ಕಾರ್ಯಕ್ರಮ ಇದ ದ್ದು ಇದೇ ಭಾನುವಾರ 2:00 ಗಂಟೆಗೆ.. ಸುಮಾರುಎರಡು ಗಂಟೆಗಳ ಕಾರ್ಯಕ್ರಮ ಇದಾಗಿದ್ದು ... ಅತಿ ಅದ್ಭುತವಾಗಿ ಮೂಡಿಬಂದಿತ್ತು, ಬಂದಿದ್ದ ಎಲ್ಲಾ ಮಕ್ಕಳ ತಂದೆ-ತಾಯಿಯರು ಸಹ ತದೇಕಚಿತ್ತದಿಂದ ಕಾರ್ಯಕ್ರಮವನ್ನು ನೋಡಿ, ಅದರಲ್ಲಿ ಅಡಗಿರುವ ಅಥವ ತಿಳಿಸಿ ಹೇಳುತ್ತಿರುವ ಪ್ರಸಕ್ತ ವಿದ್ಯಮಾನಗಳ ಕನ್ನಡಿಯನ್ನು ನೋಡಿ ,ತಮ್ಮನ್ನು ತಾವೇ ಪ್ರಶ್ನಿಸಿಕೊಂಡು ವಿಮರ್ಶೆ ಮಾಡುವುದಕ್ಕೆ ಕಾರಣವಾಯಿತು...

ಪ್ರತಿಯೊಂದು ಹಂತದಲ್ಲೂ ಕೂಡ ಈ ಕಾರ್ಯಕ್ರಮದ ಹಿಂದಿರುವ ಕಾಳಜಿ, ವಹಿಸಿರುವ ಶ್ರಮ, ಶ್ರದ್ಧೆ ಹಾಗೂ ಅದಕ್ಕೆ ಪೂರಕವಾಗಿ ಅಚ್ಚುಕಟ್ಟಾಗಿ ಎಲ್ಲವನ್ನೂ ನಿಭಾಯಿಸಿದ ರೀತಿ ನಿಜಕ್ಕೂ ಶ್ಲಾಘನೀಯ..

ಡಾಕ್ಟರ್ ಕಶ್ಯಪ್ ಇವರು ಇರುತ್ತಾರೆ ಎಂದರೆ ಅಲ್ಲಿ ಏನಾದರೂ ಒಂದು ಸಾಮಾಜಿಕ ಕಳಕಳಿಯ ಸಾಂದರ್ಭಿಕ ಚಿತ್ರಣಗಳು ಹಾಗೂ ನೆರೆದಿರುವ ಪ್ರೇಕ್ಷಕರನ್ನು ವಿಮರ್ಶೆಗೆ ಒಳಪಡಿಸುವ ಒಂದು ಅದ್ಭುತವಾದ ಮೆಸೇಜ್ ಇರುತ್ತದೆ... ನನ್ನ ಊಹೆ ಕೂಡ ಸರಿಯಾಗಿತ್ತು .

" ಹೊತ್ತಿಗೆಯ ಹೊತ್ತು" ಕಂಪ್ಯೂಟರ್ ಮೊಬೈಲ್ ಫೋನ್ ತರಹೇವಾರಿ ಆಪ್ ಗಳು ಟಿವಿಗಳು ಎಡಬಿಡದೆ ಬರುತ್ತಿರುವ ಲೈವ್ ಶೋಗಳು, ಈ ಎಲ್ಲಾ ಕಾರಣಗಳಿಂದ ಪುಸ್ತಕಗಳನ್ನು ಓದುವವರ ಸಂಖ್ಯೆ ನಿಜವಾಗು ಕಮ್ಮಿಯಾಗುತ್ತಿದೆ, ಇದು ಎಲ್ಲರಿಗೂ ಗೊತ್ತಿರುವ ವಿಷಯ. ಕೆಲವೊಂದು ವರ್ಗ ಮಾತ್ರ ಪುಸ್ತಕಗಳನ್ನು ಪ್ರೀತಿಸಿ ಓದುತ್ತಿದ್ದಾರೆ... ಇದರ ಬಗ್ಗೆ ಬೆಳಕು ಚೆಲ್ಲುವ ಒಂದು ಅದ್ಭುತ ಕಲ್ಪನೆಯ " ಹೊತ್ತಿಗೆಯ ಹೊತ್ತು" ರಂಗ ಪ್ರಯೋಗ ತುಂಬಾ ಚೆನ್ನಾಗಿತ್ತು, ಚಿಕ್ಕ ಮಕ್ಕಳು ಮಾಡಿರುವ ಪ್ರತಿಯೊಂದು ಭಾಗ ಅಥವಾ ಪ್ರತಿಯೊಂದು ಪಾತ್ರ ನಮ್ಮನ್ನು ನಾವೇ ಪ್ರಶ್ನಿಸುವ ಹಾಗೆ ಮಾಡಿತ್ತು.

ಹರಿಕಥಾ ಪ್ರ ಸಹನ ದಿಂದ ಶುರುವಾಗುವ ನಾಟಕ ಸಿಂಡ್ರೆಲಾ, ಕ್ರಿಸ್ಮಸ್ ತಾತ, ತೇಜಸ್ವಿಯವರ ಮಂದಣ್ಣ, ಮಾಸ್ತಿಯವರ ಮೊಸರಿನ ಮಂಗಮ್ಮ ಇಂತಹ ಅದ್ಭುತ ಪಾತ್ರಗಳನ್ನು ನಾವುಗಳು ಓದದೆ ನಿರ್ಲಕ್ಷಿಸಿ ಅವುಗಳ ಬಣ್ಣ ಕಳೆದು ಕೊಳ್ಳುವ ಹಾಗೆ ಮಾಡುತ್ತಿರುವ ನಮ್ಮತನವನ್ನು ಪ್ರಶ್ನಿಸಿಕೊಳ್ಳುವ ಸಮಯವನ್ನು ತಿಳಿಹೇಳಿ ಹೇಳಿತು...  ಪುಸ್ತಕದ ಹುಳ  ಕೂಡ ಚಿತ್ರಗಳುಳ್ಳ ಪುಸ್ತಕಗಳು ಬೇಕು ... ಅದು ಯಾಕೆ ಅದನ್ನು ಕೇಳ್ತಾ ಇದೆ ಅಂತ ಪೂರ್ತಿ ನಾಟಕ ನೋಡಿದರೆ ಗೊತ್ತಾಗುವುದು.

ಇದಕ್ಕೆ ಪೂರಕವಾಗಿ ಅಂತರ್ಜಾಲ ಹಾಗೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ರೀತಿ ಅದ್ಭುತ ಕಲ್ಪನೆ ರಂಗಪ್ರಯೋಗ... ಚಿಕ್ಕ ಮಕ್ಕಳಾದಿಯಾಗಿ ಎಲ್ಲಾ ಪಾತ್ರಗಳಿಗೆ ಭಾವತುಂಬಿ ನಟಿಸಿದ ಚಿಕ್ಕಮಕ್ಕಳಿಗೆ ಅನಂತ ಧನ್ಯವಾದಗಳು... ಇದರ ಹಿಂದಿನ ಶಕ್ತಿ ಡಾಕ್ಟರ್ ಕಶ್ಯಪ್ ಅವರಿಗೆ ಅನಂತ ನಮನಗಳು....

ಈ ಕಾರ್ಯಕ್ರಮದ ನಿರೂಪಣೆಯನ್ನು ಇಬ್ಬರು ಪುಟಾಣಿ ಮಕ್ಕಳು ನಡೆಸಿಕೊಟ್ಟರು ಅಬ್ಬಾ ಎಂತಹ ವಾಕ್ಚಾತುರ್ಯ ಹಾಗೂ ಕಾರ್ಯಕ್ರಮ ನಡೆಸಿಕೊಡುವ ರೀತಿ ಅದ್ಭುತ...

ಮಹೇಶ್ ಪ್ರಿಯದರ್ಶಿನಿ ಹಾಗೂ ಮತ್ತೊಬ್ಬ ಸಂಗೀತ ಟೀಚರ್ ರಾಗ ಸಂಯೋಜಿಸಿ ಚಿತ್ರಕೂಟದ ಚಿತ್ರ ಕಥ ಇದರ ಒಂದು ಕವನ ಅಥವಾ ಪದ್ಯ ಅಥವಾ ಹಾಡು ಹಾಗು ಅದಕ್ಕೆ  ಅತಿ ಸಂಯಮದಿಂದ ಚಿಕ್ಕಮಕ್ಕಳನ್ನು ನಾಚಿಸುವಂತೆ ನಟಿಸಿ ಡ್ಯಾನ್ಸ್ ಮಾಡಿ ಅನುಭವಿಸಿದ ಚಿತ್ರಕೂಟದ ಶಿಕ್ಷಕ /ಶಿಕ್ಷಕಿ ವೃಂದದವರಿಗೆ ಒಂದು ಅದ್ಭುತ ಅಭಿನಂದನೆಗಳು ಹಾಗೂ ಚಪ್ಪಾಳೆ ಎದ್ದುನಿಂತು ಕೊಡಬೇಕು.

ಮುಂದೆ ಮಹೇಶ್ ಅವರು ಸಂಯೋಜನೆ ಮಾಡಿದ ದೇಶಭಕ್ತಿ ಅಥವಾ ದೇಶಪ್ರೇಮ ನೆನಪಿಸುವ ಸುಮಧುರ ಗೀತೆಯನ್ನು ಹತ್ತಾರು ಮಕ್ಕಳು ಒಟ್ಟಿಗೆ ಹಾಡುತ್ತಿರುವಾಗ... ನಿಜವಾಗಲೂ ಮೈ ರೋಮಾಂಚನವಾಯಿತು ಅದ್ಭುತ ಪ್ರಯೋಗ...

ಇದರ ಮಧ್ಯದಲ್ಲಿ ಪೋಷಕರು ಹಾಗೂ ಮಕ್ಕಳ ದೈನಂದಿನ ಚಟುವಟಿಕೆಗಳ ಬಗ್ಗೆ ಹಾಗೂ ಪೋಷಕರು ಮತ್ತು ಮಕ್ಕಳು ಹೀಗೆ ಸಮಾಜದಲ್ಲಿ ಇರಬೇಕು ಎನ್ನುವ ಬಗ್ಗೆ ಬಂದ ತುಣುಕುಗಳು ನಮ್ಮನ್ನು ನಾವು ತಿದ್ದಿಕೊಂಡು ಸರಿ ಮಾಡಬೇಕು ಎಂದು ಒಂದು ಸಣ್ಣ ವಧೆ ಕೊಟ್ಟಹಾಗೆ ನಡೆದು ಬಂತು... ನಮ್ಮ ದೈನಂದಿನ ಪ್ರತಿಯೊಬ್ಬರ ಬದುಕಿನಲ್ಲೂ ಕೂಡ ಕೆಲಸ ಹಾಗೂ ಕನ್ನಡ ನಿಜವಾಗಿಯೂ ಕೂಡ ನಮ್ಮ ಮಕ್ಕಳಬಗ್ಗೆ ಕಾಳಜಿ ವಹಿಸುತ್ತಿದ್ದೇವೆ ಎಂಬ ಪ್ರಶ್ನೆಯನ್ನು ಹುಟ್ಟಿಹಾಕಿತ್ತು... ದುಡ್ಡು ಇದೆ ಎಂದ ಮಾತ್ರಕ್ಕೆ ನಾವು ಚೆನ್ನಾಗಿ ಖರ್ಚು ಮಾಡುತ್ತಿದ್ದೇವೆ ಅದರಿಂದ ನಮ್ಮ ಮಕ್ಕಳು ಒಳ್ಳೆಯವರಾಗಿ ಬೆಳೆಯುತ್ತಾರೆ ಎಂಬ ಅವಿವೇಕತನದಿಂದ ಮೌಲ್ಯಯುತ ಹಾಗೂ ಜವಾಬ್ದಾರಿಯುತ ಸಣ್ಣಪುಟ್ಟ ಕೆಲಸ ಕಾರ್ಯಗಳನ್ನು ನಾವು ಕಾಳಜಿ ವಹಿಸದೆ ಅದರ ಅದರ ಮೌಲ್ಯ ತಿಳಿಸಿ ಹೇಳದೆ ನಮಗೆ ಗೊತ್ತಿದ್ದು ಅಥವಾ ಗೊತ್ತಿಲ್ಲದೆಯೋ ಬೆಳೆಸಿಕೊಂಡು ಬಂದಿರುತ್ತೇವೆ.. ಇದರ ಬಗ್ಗೆ ಮೂಡಿಬಂದ ನಾಟಕ ಹಾಗೂಚಿಕ್ಕ ಮಕ್ಕಳು ಮಾಡಿದ ಪ್ರಯೋಗ ಅತಿ ಅದ್ಭುತವಾಗಿ ಮೂಡಿಬಂತು.

ಇದಾರೆ ಜೊತೆಗೆ ದೇಶದ  ಸೈನ್ಯದ ಒಂದು ಪ್ರಯೋಗ ಅದ್ಭುತವಾಗಿ ನೆರೆದಿರುವ ಎಲ್ಲರನ್ನು ಮನರಂಜಿಸಿತು...   ಎಲ್ಲದರಲ್ಲೂ ಪುಟ್ಟ ಮಕ್ಕಳ ಅದ್ಬುತ ನಾಟ್ಯ ಹಾಗು ನಾಟಕ... ಮೂಗಿನ ಮೇಲೆ ಬೆರಳಿಟ್ಟು ನೋಡುವ ಹಾಗೆ ಮಾಡಿತು...

ಕೊನೆಯಲ್ಲಿ ಮೂರನೇ ತರಗತಿಯ ಮಕ್ಕಳು ನಡೆಸಿಕೊಟ್ಟ ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಪುಣ್ಯಕೋಟಿ ನಾಟ್ಯ ಪ್ರಯೋಗ ಅತಿ ಅದ್ಭುತವಾಗಿ ಮೂಡಿಬಂತು ಹಾಗೆ ಕುಳಿತಿರುವವರ ಕಣ್ಣಂಚಿನಲ್ಲಿ ನೀರನ್ನು ಕೂಡ ತರಿಸಿತು..

ನಿನಗೆ ನಿಜವಾಗಲೂ ಕೂಡ ಯಾವುದೋ ಒಂದು ಲೈವ್ ಕಾಂಟೆಸ್ಟ್ ಅಥವಾ ಒಂದು ರಂಗಭೂಮಿಯ ಮಧ್ಯದಲ್ಲಿ ಇದ್ದೀನಿ ಅಂತ ಅನಿಸಿತು ಸ್ಕೂಲ್ ಡೇ ಇವೆಂಟ್. ಇದು ಒಂದು ತರಹ ಚಿತ್ರಕೂಟ ಫ್ಯಾಮಿಲಿ ಇವೆಂಟ್ ತರ ಇತ್ತು... ಈ ಹದಿನೈದು ವರ್ಷಗಳಲ್ಲಿ ಶ್ರಮಿಸಿದ ಎಲ್ಲರನ್ನೂ ನೆನೆದು ಚಿತ್ರಕೂಟ ಶಾಲೆ ಬೆಳೆದು ಬಂದ ಪ್ರತಿಯೊಂದು ಹಂತವನ್ನು ಜವಾಬ್ದಾರಿಯುತವಾಗಿ ಹೇಳಿ ಮುಂದಿರುವ ಸವಾಲುಗಳನ್ನು ತಿಳಿಸಿ ಒಂದು ರಚನಾತ್ಮಕ ಪ್ರಯೋಗವಾಗಿ ಸ್ಕೂಲ್ ಡೇ ಈವೆಂಟ್ ಅನ್ನು ಆಯೋಜಿಸಿದ ರೀತಿಗೆ ನಮ್ಮೆಲ್ಲರ ಸಹಮತ ಸಹಕಾರ ಇದ್ದೇ ಇರುತ್ತದೆ.

ಇಂತಹ ಪ್ರಯೋಗಗಳಿಂದ ಚಿತ್ರಕೂಟ ಶಾಲೆಯ ಜವಾಬ್ದಾರಿಗಳು ಇನ್ನೂ ಹೆಚ್ಚುತ್ತ, ಭವಿಷ್ಯದಲ್ಲಿ ಇನ್ನೂ ಹೆಚ್ಚು ಹೆಚ್ಚು ಇದೇ ರೀತಿ ಹೊಸತರದ ಪ್ರಯೋಗಗಳನ್ನು ರೂಪಿಸ ಬೇಕಾದ ಜವಾಬ್ದಾರಿಯನ್ನು ಚಿತ್ರಕೂಟ ಶಾಲೆಯು ತನ್ನ ಮೇಲೆ ಹೊರಿಸಿ ಕೊಂಡಿದೆ



" ಹೊತ್ತಿಗೆಯ ಹೊತ್ತು"  ನಾಟಕ 






ಚಿತ್ರಕಥಾ ...ಹಾಡಿಗೆ ರಾಗ ಸಂಮಯೋಜಿಸಿದ ಮಹೇಶ್.. 
 ಎಲ್ಲ ಶಿಕ್ಷಕ ವೃಂದದ ನಾಟ್ಯ....







 ಪ್ರಸ್ತುತ ವಿದ್ಯಮಾನಗಳ ... ಮಕ್ಕಳ ಹಾಗು ಪೋಷಕರ ಜವಾಬ್ದಾರಿ ನೆನಪಿಸುವ ಒಂದು ಅರ್ಥ ಗರ್ಭಿತ  ನಾಟಕ...














 ಎಲ್ಲ ಕಾರ್ಯಕ್ರಮಗಳ ಹಿಂದಿನ ರೂವಾರಿಗಳಾದ ...ಡ್ಯಾನ್ಸ್ ಟೀಚರ್ಸ್......

















Thursday, May 9, 2019

ದೇಸಿ ಹಸುಗಳ ಮಹತ್ವ - ಮಾಲೂರಿನ ಗೋಶಾಲೆ ಯಲ್ಲಿ ಒಂದು ದಿನ..




World Earth Day ವರ್ಲ್ಡ್ ಅರ್ಥ್ ಡೇ . ಈ ದಿನದ ಅಂಗವಾಗಿ ಗೋಪಾಲ' (GoPals) ಅಂದರೆ ಗೋವು  ಪಾಲಕರು ಅಥವಾ ಗೋ ಫ್ರೆಂಡ್ಸ್... ಈ ಸಂಸ್ಥೆಯ ವತಿಯಿಂದ ಬೆಂಗಳೂರಿನಿಂದ ಸುಮಾರು 50ರಿಂದ 60 ಕಿಲೋಮೀಟರ್ ದೂರದಲ್ಲಿ ಇರುವ ಮಾಲೂರು ಇದರ ಹತ್ತಿರ ರಾಘವೇಂದ್ರ ಗೋಶಾಲೆಯ ಅಂತ ಇದೆ. ಇಲ್ಲಿಗೆ ಒಂದು ದಿನದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು, ದೇಸಿ ಹಸುಗಳ ಬಗ್ಗೆ ದೇಸಿ ತಳಿಗಳ ಬಗ್ಗೆ ಹಾಗೂ ಪರಿಸರದ ಬಗ್ಗೆ ಆಸಕ್ತಿ ಇರುವ ನೂರಾರು ಕಾರ್ಯಕರ್ತರು ಅದುವ ಪರಿಸರ ಪ್ರೇಮಿಗಳು ಏಪ್ರಿಲ್ 28 ಭಾನುವಾರ ಇಲ್ಲಿ ಸೇರಿದ್ದರು...
  


ಚಿಕ್ಕದಾದ ಬೆಳಗಿನ ಉಪಹಾರವನ್ನು ಸೇವಿಸಿ ಬಂದಿದ್ದ ಎಲ್ಲಾ ಕಾರ್ಯಕರ್ತರು ರಾಘವೇಂದ್ರ ಗೋಶಾಲೆ ಇಲ್ಲಿರುವ ದನದ ಕೊಟ್ಟಿಗೆ ಅಥವಾ ಗೋವುಗಳ ಕೊಟ್ಟಿಗೆಯನ್ನು ತಮ್ಮ ಕೈಲಾದ ಮಟ್ಟಿಗೆ ಸ್ವಚ್ಛ ಮಾಡಿ ಅಲ್ಲಿದ್ದ ಗೋಮೂತ್ರ ಗಂಜಲ ಹಾಗು ಸಗಣಿ ಗಳನ್ನು ಬೇರೆ ಕಡೆ ಸಾಗಿಸುವಲ್ಲಿ ನೆರವಾದರು... ತುಂಬಾ ದೂರದ ಊರುಗಳಿಂದ ಬಂದಿದ್ದ ಆಸಕ್ತಿದಾಯಕ ರೈತರು ಕೂಡ ಇದರಲ್ಲಿ ಪಾಲ್ಗೊಂಡು ಇದರ ಮಹತ್ವವನ್ನು ಇಲ್ಲಿ ಸೇರಿದ್ದ ಜನರಿಗೆ ತಿಳಿಸಿ ಹೇಳಿದರು... ದೇಸಿ ಹಸುಗಳ ಗಂಜಲ ಹಾಗೂ ಸಗಣಿ ಅಂತ ನಾವು ಏನು ಕರೆಯುತ್ತೇವೆ ಅದರ ವಾಸನೆ ಕುಡಿಯುವುದರಿಂದಲೂ ಎಷ್ಟು ರೋಗಗಳಿಂದ ದೂರವಿರಬಹುದು...





ರಾಮಚಂದ್ರಾಪುರ ಮಠ ಇದರ ಅಂಗಸಂಸ್ಥೆಯಾದ ರಾಘವೇಂದ್ರ ಗೋಶಾಲೆಯ ನೂರಾರು ದೇಸಿ ತಳಿಗಳ ಹಸುಗಳನ್ನು ಸಾಕಿ ಸಲಹುತ್ತಿದೆ.. ಗೋವುಗಳ ಕೊಟ್ಟಿಗೆಗಳನ್ನು ಸ್ವಚ್ಛ ಅಭಿಯಾನದ ಮೂಲಕ ನಮ್ಮ ಕೈಲಾದ ಮಟ್ಟಿಗೆ ಸ್ವಚ್ಛ ಮಾಡಿ, ಇಲ್ಲಿರುವ ಗೋವಿನ ತಳಿಗಳ ಬಗ್ಗೆ ಅದರ ಮಹತ್ವ ಹಾಗು ಅದರಿಂದ ಆಗುವ ಉಪಯೋಗದ ಬಗ್ಗೆ ನಮ್ಮ "ಗೂ ಪಾಲ್ಸ್" ತಂಡದ ಸಂದೀಪ್ ಹಾಗೂ ಅವರ ಸ್ನೇಹಿತರು ತುಂಬಾ ಚೆನ್ನಾಗಿ ವಿವರಿಸಿ ಅಲ್ಲಿ ನೆರೆದಿದ್ದ ಮಿತ್ರರಿಗೆ ಇದರ ಮಹತ್ವ ಹಾಗೂ ಉಪಯೋಗಗಳನ್ನು ತಿಳಿಸಿ ಹೇಳಿದರು.... ದೇಸಿ ತಳಿ ಹಸುಗಳ ಹಾಲು 100 ಎಂಎಲ್ ಕುಡಿದರೂ ಸಾಕು... ಅದರಿಂದ ಎಷ್ಟು ಉಪಯೋಗ ಇರುತ್ತದೆ... ಈ ದೇಸಿ ತಳಿಗಳು.. ಹಾಲು ಕೊಡುವುದು ಸ್ವಲ್ಪ ಕಮ್ಮಿ.. ಈ ಹಾಲಿನ ಮಹತ್ವ ತುಂಬಾನೇ ಜಾಸ್ತಿ ಇದೆ... ನಮ್ಮ ರೈತರು ಮಿಶ್ರ ತಳಿಗಳ ಹಸುಗಳನ್ನು ಹೆಚ್ಚು ಹೆಚ್ಚು ಸಾಕುತ್ತ ಅದರಿಂದ ಹೆಚ್ಚಿಗೆ ಬರುವ ಹಾಲನ್ನು ಪಡೆಯುವ ಉದ್ದೇಶದಿಂದ ದೇಸಿ ತಳಿಗಳ ಅಳಿಯುವಿಕೆ ಎಲ್ಲಿ ತಿಳಿದು ಅಥವಾ ತಿಳಿಯದೆಯೋ ಪಾತ್ರವನ್ನು ವಹಿಸುತ್ತಿದ್ದಾರೆ... ಸಂದೀಪ್ ಜಿ ಅವರು ಹೇಳಿದ ಒಂದು ಮಾತಂತೂ ನಮ್ಮನ್ನೆಲ್ಲ ಯೋಚಿಸುವಂತೆ ಮಾಡಿತು... ಸಾಮಾನ್ಯವಾಗಿ ಹಸುಗಳಿಗೆ ಯಾವುದಾದರೂ ರೋಗ ಬಂದರೆ ಅದಕ್ಕೆ ರೋಗನಿರೋಧಕ ಔಷಧಿಗಳನ್ನು ಕೊಡುತ್ತಾರೆ.. ಹಾಗೆ ಕೊಟ್ಟಾಗ ಆಂಟಿ ಬಯೋಟಿಕ್ ಅದು ರೋಗ ನಿರೋಧಕ ಔಷಧಿ ಇವುಗಳು ಹಾಲಿನ ಮುಖಾಂತರ ಹೊರಬರುತ್ತವೆ... ಎಲ್ಲಾ ರೋಗ ನಿರೋಧಕ ಔಷಧಿಗಳ ಮೇಲೆ ಸ್ಪಷ್ಟವಾಗಿ ಬರೆದಿರುತ್ತಾರೆ.. ಔಷದ ಕೊಟ್ಟಾಗ ಕನಿಷ್ಠ ಎಂದರು ಎರಡರಿಂದ ಮೂರು ದಿನ ಹಾಲನ್ನು ಬಳಕೆ ಮಾಡುವ ಹಾಗಿಲ್ಲ.... ವಿಪರ್ಯಾಸ ಎಂದರೆ ನಿಮ್ಮ ಮಾನವನ ದುರಾಸೆ ಇದೆಲ್ಲವನ್ನು ನಿರ್ಲಕ್ಷಿಸಿ ಬಿಟ್ಟಿದೆ.. ದಿನದಲ್ಲಿ ಕೊಡುವ ಹತ್ತರಿಂದ ಹದಿನೈದು ಲೀಟರ್ ಹಾಲು ಯಾರು ತಾನೇ ಚೆಲ್ಲಲು ಬಯಸುತ್ತಾರೆ... ನೀವೇ ಯೋಚಿಸಿ... ಗೊತ್ತಿದ್ದೋ ಗೊತ್ತಿಲ್ಲದೆಯೋ ರೋಗನಿರೋಧಕ ಸೇರಿರುವ ಹಾಲು.. ನಂದಿನಿ ಪ್ಯಾಕೆಟ್ ಮೂಲಕ ಅದು ಯಾವುದು ಕಂಪನಿಯ ಪ್ಯಾಕೆಟ್ ಹಾಲಿನ ಮೂಲಕ ನಮ್ಮ ದೇಹಕ್ಕೆ ಸೇರುತ್ತಿದೆ.... ಕೆಲವೊಂದು ಅಧ್ಯಯನದ ಪ್ರಕಾರ ಈಗಿನ ಕಾಲದ ಹೆಣ್ಣು ಮಕ್ಕಳು ಅತಿ ಚಿಕ್ಕ ವಯಸ್ಸಿಗೆ ಋತುಮತಿ ಆಗುತ್ತಿರುವುದಕ್ಕೆ ಇದು ಒಂದು ಕಾರಣವಂತೆ...









ದೇಸಿ ತಳಿ ಗಳ ಬಗ್ಗೆ ಹಾಗೂ ಹಸುಗಳ ಮಹತ್ವದ ಬಗ್ಗೆ ತಿಳಿದುಕೊಳ್ಳಲು ಬೇಕಾದಷ್ಟು ವಿಷಯಗಳಿವೆ... ನಮ್ಮ ರೈತರಿಗೆ ಇದೆಲ್ಲಾ ಗೊತ್ತಿಲ್ಲ ಎನ್ನುವ ಹಾಗಿಲ್ಲ... ಹಳೆ ತಲೆಮಾರಿನ ರೈತರಿಗೆಲ್ಲಾ ಗೊತ್ತಿರುವ ವಿಷಯವೇ ಆದರೆ ಅನಿವಾರ್ಯ ಕಾರಣಗಳಿಂದಾಗಿ ಹೆಚ್ಚಿನ ಆಸೆ ಮತ್ತು ಲಾಭಕ್ಕೋಸ್ಕರ, ದೇಸಿ ಹಸುವಿನ ತಳಿಗಳ ಸಂತತಿ ನಾಶವಾಗುತ್ತಾ ಬರುತ್ತಿದೆ.. ಇನ್ನಾದರೂ ಮನುಷ್ಯ ತನ್ನ ಸ್ವಾರ್ಥ ಲಾಭವನ್ನು ಬದಿಗಿಟ್ಟು ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗಾಗಿ ಹಾಗೂ ಭವಿಷ್ಯದ ದೃಷ್ಟಿಯಿಂದ ದೇಸಿ ತಳಿ ತಳಿ ಗಳ ಸಂಸ್ಕರಿಸುವಿಕೆ ಹಾಗೂ ಅದನ್ನು ಬೆಳೆಸುವ ಒಂದು ಕಾರ್ಯವನ್ನು ಎಲ್ಲರೂ ಜೊತೆಗೂಡಿ ಮಾಡಬೇಕಾಗಿದೆ...

ದೇಸಿ ಹಸುಗಳ ಹಾಗೂ ಅವುಗಳ ಬಗ್ಗೆ ಆಶ್ರಮದಲ್ಲಿರುವ ದೇಸಿ ಹಸುಗಳ ನೋಡಿಕೊಂಡೆ ಅದರ ಬಗ್ಗೆ ಅಪಾರವಾದ ಜ್ಞಾನ ಸಂಪತ್ತನ್ನು ತಿಳಿದುಕೊಂಡು ಮುಂದಿನ ಕಾರ್ಯಕ್ರಮಕ್ಕೆ ಅಣಿಯಾದೆವು...

ಮುಂದಿನ ಕಾರ್ಯಕ್ರಮಕ್ಕೆ ಮುಂಚೆ ಶುಂಠಿ ಶುಂಠಿ ಹಾಗೂ ಮಸಾಲೆ ಮಜ್ಜಿಗೆಯನ್ನು ಕುಡಿದು... ಮುಂದಿನ ಕಾರ್ಯಕ್ರಮವಾದ ಗೋಪೂಜೆ ಅಭಿಯಾನಕ್ಕೆ ಮತ್ತೆ ಎಲ್ಲಾ ಒಟ್ಟಿಗೆ ಸೇರಿದವು... ಬೆಂಗಳೂರಿನಿಂದ ಬಂದಿದ್ದ ದಂಪತಿಗಳು ಒಟ್ಟಿಗೆ ಸೇರಿ ಗೋ ಪೂಜೆಯನ್ನು ಮಾಡಿ ಎಲ್ಲಾ ಹಸುಗಳಿಗೂ ಬಾಳೆಹಣ್ಣು ನೀಡಿದರು..

ಇದಾದ ಬಳಿಕ ಸಂದೀಪ್ ಮಂಜುನಾಥ್ ಅವರು "ಘನ ಜೀವಮೃತ" ಇದನ್ನು ತಯಾರಿಸುವ ಬಗ್ಗೆ ಪ್ರಾತ್ಯಕ್ಷಿಕ ಮಾಹಿತಿಯನ್ನು ಹಾಗು ತಯಾರಿಸುವ ವಿಧಾನವನ್ನು ತಿಳಿಸಿಕೊಟ್ಟರು ಅಲ್ಲಿ ನೆರೆದಿದ್ದ ಅಂತ ಎಲ್ಲರೂ "ಘನ ಜೀವಮೃತ" ಇದರ ಬಿರಣಿ ಗಳನ್ನು ತಯಾರಿಸಿ ಹೋಗುವಾಗ ತಮ್ಮ ಜೊತೆಯಲ್ಲಿ ತಮ್ಮ ಮನೆಯಲ್ಲಿರುವ ಸಸ್ಯಗಳಿಗೆ ಹಾಕಲೆಂದು ತೆಗೆದುಕೊಂಡು ಹೊರಟರು...





ಯಾದ ಬಳಿಕ ಅತಿ ಉಪಯುಕ್ತ ಮರದ ಬೀಜಗಳನ್ನು ಉಪಯೋಗಿಸಿ ಮಣ್ಣಿನ ಬೀಜದ ಉಂಡೆ ಅಂದರೆ ಸೀಡ್ಸ್ ಬಾಲ್.. ಇದನ್ನು ಚಿಕ್ಕ ಮಕ್ಕಳು ,ವಯೋವೃದ್ಧರು, ಹಿರಿಯರು.. ಎಲ್ಲರೂ ಜೊತೆಗೂಡಿ ತಮ್ಮ ಕೈಲಾದ ಮಟ್ಟಿಗೆ ಮಣ್ಣಿನ ಬೀಜದ ಉಂಡೆ ಗಳನ್ನು ಮಾಡಿ ಅದನ್ನು ಒಣಗಲು ಇಟ್ಟರು..
test








ಇದಾದ ಬಳಿಕ Shri Mallinath Hemadi ji ಇವರು ತಮ್ಮ ಅನುಭವದ ಮೇಲೆ ಬರೆದ ಒಂದು ಸಣ್ಣ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು... ಇದು ನಿಜವಾಗಲೂ ಹಳ್ಳಿ ರೈತರಿಗೆ ಹಾಗೂ ನೈಸರ್ಗಿಕವಾಗಿ ಗಿಡಮರಗಳನ್ನು ಬೆಳೆಸಲು ಉಪಯೋಗಿಸುವ ವಿಧಾನಗಳನ್ನು ತುಂಬಾ ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿ ಈ ಪುಸ್ತಕದಲ್ಲಿ ಬರೆದಿದ್ದಾರೆ.

ಮೂಲತಹ ಇವರು ಪ್ರೊಫೆಸರ್... ಅರ್ಧಗಂಟೆ ಇವರು ಆಡಿದ ಮಾತುಗಳು.. ಅದ್ಭುತವಾಗಿದೆ... ಪರಿಸರದ ಬಗ್ಗೆ ದೇಸಿ ಹಸುಗಳ ಬಗ್ಗೆ .. ಇವರು ಹೊಂದಿರುವಂತಹ ಜ್ಞಾನ ಅಪಾರ... ಒಂದೇ ದಿನದಲ್ಲಿ ಇವರ ಎಲ್ಲಾ ಪುಸ್ತಕಗಳು ಮಾರಾಟವಾಗಿ ಮರುಮುದ್ರಣಕ್ಕೆ ಹೋಗಿದೆ... ಕೃಷಿಯ ಬಗ್ಗೆ ಹಾಗೂ ಮರಗಿಡಗಳ ಔಷಧಿಗಳ ಬಗ್ಗೆ ಒಂದು ಉಪಯುಕ್ತ ಕೈಪಿಡಿ ಅಂತ ಅನ್ನಬಹುದು.. ನಿಮಗೆ ಇದರ ಪುಸ್ತಕ ಬೇಕಿದ್ದಲ್ಲಿ ದಯಮಾಡಿ ನನ್ನನ್ನು ಅಥವಾ ಗೋಪಾಲ್ ಟೀಮ್ ಇವರನ್ನು ಸಂಪರ್ಕಿಸಿ.. ಹೆಚ್ಚು ಹೆಚ್ಚು ಜನರಿಗೆ ಮುಖ್ಯವಾಗಿ ಹಳ್ಳಿಗರಿಗೆ ಈ ಪುಸ್ತಕದಿಂದ ಆಗುವ ಉಪಯೋಗ ತುಂಬಾ ಹೆಚ್ಚಾಗಿರುತ್ತದೆ ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಜನರಿಗೆ ಇಂತಹ ಅಮೂಲ್ಯ ವಿಷಯಗಳನ್ನು ತಿಳಿಸಿ ಹೇಳಬೇಕಾದ ಕರ್ತವ್ಯ ಅನಿವಾರ್ಯತೆ ನಮ್ಮ ಮೇಲೆ ಇದೆ...









https://www.facebook.com/wegopals/videos/861007737567547/?t=1050


ಇದಾದ ಬಳಿಕ ಶುದ್ಧ ಹಳ್ಳಿ ಸೊಗಡಿನ ಊಟ ಹಾಗೂ ಅದರಲ್ಲಿದ್ದ ಹಲಸಿನ ಹಣ್ಣಿನ ಪಾಯಸ ತುಂಬಾ ಚೆನ್ನಾಗಿದ್ದು.. ಎಲ್ಲರೂ ಎರಡೆರಡು ಬಾರಿ ಹಾಕಿಸಿಕೊಂಡು ಊಟವನ್ನು ಮಾಡಿದರು...









ನಾನು ಕೂಡ ನಮ್ಮ ಸಂಸಾರ ಸಮೇತನಾಗಿ ನಮ್ಮ ತಾಯಿಯನ್ನು ಕರೆದುಕೊಂಡು ಈ ಕಾರ್ಯಕ್ರಮಕ್ಕೆ ಹೋಗಿದ್ದು ಒಂದು ಒಳ್ಳೆಯ ವಿಚಾರವನ್ನು ವಿನಿಮಯ ಮಾಡಿಕೊಳ್ಳುವ ಹಾಗಾಯಿತು. ನನ್ನ ಪುಟ್ಟ ಮಕ್ಕಳಾದ ಪ್ರಣವ್ ಹಾಗೂ ತೀಕ್ಷ್ಣ ಅತಿ ಉತ್ಸಾಹದಿಂದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಪುಟ್ಟ ಪುಟ್ಟ ಹಸುವಿನ ಕರುಗಳ ಮೈದ ವಡಿ.. ಕರುಗಳ ಜೊತೆ ಚೆನ್ನಾಗಿ ಆಟವಾಡಿ ಒಂದು ಅಮೂಲ್ಯವಾದ ದಿನವನ್ನು ಕಳೆದರು...

ಮುಂದೆ ಈ ತರಹದ ತುಂಬಾ ಕಾರ್ಯಕ್ರಮಗಳು ನಡೆಯಬೇಕು ಹಾಗೂ ನಡೆಯಬೇಕಾದ ಅನಿವಾರ್ಯತೆ ಇದೆ ಅದೇ ರೀತಿ ಇನ್ನು ಹೆಚ್ಚು ಹೆಚ್ಚು ಹೆಚ್ಚು ಪರಿಸರ ಪ್ರಿಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ತನ್ಮೂಲಕ ದೇಸಿ ಹಸುಗಳ ಹಾಗೂ ಅದರ ಮಹತ್ವದ ಬಗ್ಗೆ ಅರ್ಥಪೂರ್ಣ ವಿವರಗಳನ್ನು ತಿಳಿದು ತಿಳಿಸಿ ಹೇಳಬೇಕಾಗಿ ವಿನಂತಿ.

ಕಾರ್ಯಕ್ರಮದ ಸಂಪೂರ್ಣ ಫೋಟೋಗಳು ಈ ಕೆಳಗಿನ ಲಿಂಕ್ ನಲ್ಲಿ

https://photos.app.goo.gl/kuMNnjnmSv7e3Vjw5


ಗೋಪಾಲ್ಸ್  ಬಗ್ಗೆ ಮಾಹಿತಿ :- http://wegopals.com/
ಗೋಪಾಲ್ಸ್ ತಂಡ ನೆಡೆದು ಬಂಡ ರೀತಿ :- http://wegopals.com/our-journey/