Monday, July 25, 2022

ಮಕ್ಕಳು ಮತ್ತು ಪರಿಸರ ಹಾಗು ವನದರ್ಶನ ಪ್ರವಾಸ

 



ನಾಗಮಂಗಲ ಕನ್ನಡ ಸಂಘ ವತಿ ಇಂದ ಆಯೋಜಿಸಿದ್ದ ಚಿಕ್ಕ ಮಕ್ಕಳ "ವನಪ್ರವಾಸಕ್ಕೆ" ನನ್ನನ್ನು ಪಕ್ಷಿಗಳ ಬಗ್ಗೆ ಹಾಗು ಪರಿಸರದ ಬಗ್ಗೆ ಚಿಕ್ಕ ಮಕ್ಕಳಿಗೆ ತಿಳಿಸಿಕೊಡಲು ಕರೆದಿದ್ದರು.
ನಾಗಮಂಗಲ ತಾಲೂಕಿನ ಚೆನ್ನಸಂದ್ರ ಹತ್ತಿರ ಇರುವ ಕಿರು ಅರಣ್ಯಕ್ಕೆ ಚಿಕ್ಕಮಕ್ಕಳ ಸಮೇತ ನಾವೆಲ್ಲ ಹೋಗಿದ್ದೆವು.
ಬೇರೆ ಬೇರೆ ಶಾಲೆಗಳಿಂದ ಆಯ್ದ ಸುಮಾರು ಮೂವತ್ತು ೩೦ ಜನ ಶಾಲೆ ಮಕ್ಕಳು ಬಂದಿದ್ದರು.


ನಾಗಮಂಗಲ ತಾಲೂಕಿನ ಕನ್ನಡ ಸಂಘ ಅದ್ಭುತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಚಿಕ್ಕ ಮಕ್ಕಳ ಉತ್ಸಾಹ .. ಅವರ ತರ ತರಹದ ಕುತೂಹಲ ಬರಿತ ಪ್ರಶ್ನೆಗಳು. ಕಾಡಿನ ಪರಿಸರದಲ್ಲಿ ಇವರು ಪಾಲ್ಗೊಂಡ ರೀತಿ.. ನಮಗೆ ಇನ್ನಷ್ಷ್ಟು ಹೇಳಬೇಕು ಎಂದು ಪ್ರೇರೇಪಿಸಿತ್ತು.
ಬೇರೆ ಬೇರೆ ಶಾಲೆಯ ಮಕ್ಕಳು ಎಲ್ಲ ಸೇರಿ ಕಲಿತು ಬೆರೆತು.. ಪರಿಸರದ ಬಗ್ಗೆ , ಪ್ಲಾಸ್ಟಿಕ್ ನಿಂದ ಆಗುವ ಅನಾಹುತದ ಬಗ್ಗೆ , ಪಕ್ಷಿಗಳ ಬಗ್ಗೆ, ಮರ ಗಿಡ ಇವುಗಳ ಬಗ್ಗೆ ಪ್ರತ್ಯಕ್ಷವಾಗಿ ತಿಳಿದು ಕೊಂಡರು...
ನಮ್ಮ ತಂಡದ ಜೊತೆ ಬೆಂಗಳೂರಿನಿಂದ ಬಂದಿದ್ದ.. ವರಪ್ರಸಾದ್ ಮತ್ತು ಕುಟುಂಬ, ಸುರೇಶ ಅವರ ಕುಟುಂಬ ಹಾಗು ರಾಮ್ ಪ್ರಸಾದ್, ರಾಮಚಂದ್ರ ರಾವ್, ಯಶಸ್ವಿ ಜಯಕುಮಾರ್ ಹಾಗು ಭಾಸ್ಕರ ಅವರು ತುಂಬ ಆಸಕ್ತಿ ಇಂದ ಮಕ್ಕಳ ಜೊತೆ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸಿದರು.
ಮಕ್ಕಳ ಜೊತೆ ಕಾಡಿನಲ್ಲಿ ಕಳೆದ ಸಮಯ..  ಕಾಡಿನ ಮಧ್ಯದಲ್ಲೇ ಎಲ್ಲರ ಜೊತೆ ಗೊಡಿ ಮಾಡಿದ ಮಧ್ಯಾಹ್ನದ ಊಟ ...ಆಹಾ ಹಸಿರು ಪರಿಸರದಲ್ಲಿ ಎಂತಹ ಸವಿ ಸಮಯ....


ನಮ್ಮ ತಂಡದ ಚಿಕ್ಕ ಮಕ್ಕಳಾದ ವಿಶೇಷ್ ಹಾಗು ಅಕ್ಷೋಭ್ಯ ತಮ್ಮ ಜೊತೆ ಕೆಲವು ಮಕ್ಕಳನ್ನು ಸೇರಿಸಿಕೊಂಡು ಪಕ್ಷಿಗಳ ಬಗ್ಗೆ ಒಳ್ಳೆ ವಿವರಣೆ ಕೊಡುತ್ತ ಅವರ ಜೊತೆ ಪಾಲ್ಗೊಂಡಿದ್ದು ಖುಷಿ ಕೊಟ್ಟಿತು..
ಒಂದು ಸುಂದರ ಭಾನುವಾರ , ನಾಗಮಂಗಲ ತಾಲೂಕಿನ ಸ್ವಚ್ಛ ಪರಿಸರದಲ್ಲಿ, ಚಿಕ್ಕ ಮಕ್ಕಳ ಜೊತೆ ಕಳೆಯುವ ಒಂದು ಅವಕಾಶ ನಮ್ಮದಾಗಿತ್ತು..
ಇಂತಹ ಅವಕಾಶ ಮಾಡಿ ಕೊಟ್ಟ ನಾಗಮಂಗಲ ತಾಲೂಕಿನ ಕನ್ನಡ ಸಂಘಕ್ಕೆ ನನ್ನ ಅನಂತ ವಂದನೆಗಳು...

ಹೆಚ್ಚಿನ ಫೋಟೋ ಹಾಗು ವಿಡಿಯೋ ಗಳನ್ನು ಈ ಕೆಳಗಿನ ಲಿಂಕ್ ನಲ್ಲಿ ನೋಡಬಹುದು 
https://photos.app.goo.gl/fSR5kgGyWrZdsuA97
https://photos.app.goo.gl/5LVPofDRwsRdHrbp6















                        ಕಾಡಿನ ಮಧ್ಯದಲ್ಲೇ ಚಿಕ್ಕಮಕ್ಕಳ ಜೊತೆ ಸವಿ ಭೋಜನ 




ಪ್ಲಾಸ್ಟಿಕ್  ಬಳಕೆ ಕಡಿಮೆ ಮಾಡುವ  ಬಗ್ಗೆ ಪ್ರತಿಜ್ಞೆ ತೆಗೆದು ಕೊಳ್ಳುತ್ತಾ ಇರುವುದು