Sunday, July 29, 2018

ಮಲೆನಾಡಿನ ಮಳೆಯ ಜೊತೆಯಲಿ .......



ಮಳೆಯಲ್ಲಿ ನೆನೆಯುವುದಕ್ಕೆ ಮಲೆನಾಡಿಗೆ ಯಾರು ಬರುತ್ತೀರಾ ಅಂತ ನನ್ನ ಸ್ನೇಹಿತರ ಹತ್ರ ಕೇಳಿದೆ.... ಮೊದಲು ಒಂದು ಮೂರ್ನಾಲ್ಕು ಜನ ನಾವು ಬರುತ್ತೇವೆ ಹೋಗೋಣ ಅಂತ ಹೇಳಿದರು, ದಿನಾಂಕ  ಫಿಕ್ಸ್ ಆಯಿತು ,  ಸರಿ ಒಂದು ಆರು ಜನ ಮಾತ್ರ ಬರುತ್ತೇವೆ ಅಂತ ಹೇಳಿದ್ದರು, ಹೊರಡುವ ಒಂದು ದಿನದ ಮುಂಚೆ ಇನ್ನೊಂದಷ್ಟು ಸ್ನೇಹಿತರು ಜೊತೆಯಾದರು, ಒಟ್ಟು 12 ಜನರ ತಂಡ, ಮಳೆಯಲ್ಲಿ ನೆನೆಯುವುದಕ್ಕೆ ಮಲೆನಾಡಿಗೆ ಹೊರಟೆ ಹೊರಟೆವು.... ಈ ವರ್ಷ ಆಗುಂಬೆ ಸುತ್ತ ಮುತ್ತ ,ಮಡಿಕೇರಿಯ ಸುತ್ತಮುತ್ತ ತುಂಬಾ ಜೋರು ಮಳೆ ಎಂದು ಪೇಪರ್ನಲ್ಲಿ ನಲ್ಲಿ ನ್ಯೂಸ್ ನಲ್ಲಿ ನೋಡಿದೆವು, ಆಗುಂಬೆಯ ಕೆಲವು ತಿರುವುಗಳಲ್ಲಿ ಭೂಕುಸಿತ ಉಂಟಾಗಿದೆ ಎಂದು ಹೇಳಲಾಗಿತ್ತು, ಆದರೂ ಸಹ ಅಷ್ಟು ಜೋರು ಜೋರು ಮಳೆಗೆ   ಇದ್ದರೂ ಸಹ ನಾವು ಆಗುಂಬೆಯ ಮಡಿಲಿಗೆ ಹೋಗಲೇಬೇಕು ಮತ್ತು ಮಳೆಯಲ್ಲಿ ನೆನೆಯಲೇ ಬೇಕು ಎಂದು ಹೊರಟಿದ್ದೆವು....!!!

july 21 ಹಾಗು 22 ಶನಿವಾರ ಮತ್ತು ಭಾನುವಾರ ಆಗುಂಬೆ ಮಡಿಲಲ್ಲಿ ನಮ್ಮ ವಾಸ್ತವ..... ಶುಕ್ರವಾರ ರಾತ್ರಿ ಗೌಜು ಗದ್ದಲಗಳ ಶಬ್ದದಿಂದ, ಜಗಮಗಿಸುವ ದೀಪಗಳ ಬೆಳಕಿನಿಂದ, ಹೊಗೆ ಮಿಶ್ರಿತ ಕಲುಷಿತ ವಾದ ಗಾಳಿಯಿಂದ ನಿಧಾನವಾಗಿ ದೂರ ಸಾಗುತ್ತಾ...... ಹಚ್ಚಹಸಿರಿನ ಸ್ವಚ್ಛವಾದ ಪರಿಸರಕ್ಕೆ ಹೊರಟೆವು....

ಬೆಳಿಗ್ಗೆ ತೀರ್ಥಹಳ್ಳಿ ಹತ್ತಿರ ಇರುವ ನಮ್ಮ ಕುವೆಂಪು ಅವರು ಹುಟ್ಟಿದ ಊರಾದ ಕುಪ್ಪಳ್ಳಿ ಪಕ್ಕ ಒಂದು ಹೋಂಸ್ಟೇ ಇನ್ನು ಮೊದಲೇ ಬುಕ್ ಮಾಡಿದ್ದೆವು.... ಅಲ್ಲಿಗೆ ತಲುಪಿದಾಗ ಬೆಳಿಗ್ಗೆ ಸುಮಾರು ಆರು ಗಂಟೆ ಆಗಿರಬಹುದು.... ದಟ್ಟವಾದ ಮೋಡಗಳಿಂದ... ಹಾಗೂ ಹೀಗೂ ಮಾಡಿ ಸೂರ್ಯ ಹೊರಬರುವುದಕ್ಕೆ ಪ್ರಯತ್ನ ಪಡ್ತಾ ಇದ್ದ ... ಶಿವಮೊಗ್ಗ ದಾಟಿ ತೀರ್ಥ ಹಳ್ಳಿ ಹತ್ತಿರ ಬರುತ್ತಿರುವಾಗಲೇ ನಮಗೆ ಮಲೆನಾಡಿನ  ಮಳೆಯ ಸೊಬಗು ಕಾಣಿಸತೊಡಗಿತ್ತು.... ಒಂದೇ ಸಮನೆ ಬೀಳುತ್ತಿರುವ ಮಳೆ.... ಜೋರಾಗಿ ಅಲ್ಲದೇ ಇದ್ದರೂ... ನಿಧಾನಕ್ಕೆ ಸುರಿಯುತ್ತಾ ಇತ್ತು... ಸುತ್ತಮುತ್ತಲೆಲ್ಲ ಮಳೆಯ ರಭಸಕೆ ಮಿಂದು ಒದ್ದೆಯಾದ ಕಪ್ಪಗಿನ ರಸ್ತೆಗಳು... ಒಂದೇಸಮನೆ ನೀರನ್ನು ಕುಡಿದು ಏಳುವುದಕ್ಕೂ ಸಾಧ್ಯವಿರದ ಮರದ ಹಸಿರಿನ ಎಲೆಗಳು.... ಚಿಕ್ಕ ಪುಟ್ಟ ಗಿಡ ಬಳ್ಳಿಗಳು.... ರಸ್ತೆಯುದ್ದಕ್ಕೂ ಕಾಣಸಿಗುವ ಅಕ್ಕಪಕ್ಕದ ಮಳೆಯಿಂದ ತುಂಬಿರುವ ಚಿಕ್ಕ ಚಿಕ್ಕ ಕೊಳ್ಳಗಳು ಇವೆಲ್ಲವೂ ನಮ್ಮ ಬರುವಿಕೆಗಾಗಿ... ಕಾದಿತ್ತು ....

ರಾತ್ರಿಯೆಲ್ಲಾ ನಮ್ಮ ಟಿ ಟಿ ನಲ್ಲಿ ಉಭಯ ಕುಶಲೋಪರಿ ಮಾತುಕತೆಗಳು.... ಒಂದು ಗಂಟೆಯ ತನಕ ನಡೆದಿತ್ತು ಅದಾದ ನಂತರ ಎಲ್ಲರೂ ನಿದ್ರೆಯಲ್ಲಿ ಜಾರಿದರು... ಆದರೆ ಮಧು ಮತ್ತೆ ಮನೋಜ್ ಎಂಬ ಚಡ್ಡಿ ದೋಸ್ತುಗಳು.... ಒಂದು ತರ ನೆಂಟರು ಹೌದು ..... ನಮಗ್ಯಾರಿಗೂ ನಿದ್ದೆಯನ್ನು ಮಾಡಲಿಕ್ಕೆ ಬಿಡಲು ತಯಾರಿರಲಿಲ್ಲ... ತುಂಬಾ ದಿನ ಆಗಿತ್ತು ಅಂತ ಕಾಣುತ್ತೆ ಸಿಕ್ಕಿ... ಅವರು ಕೂಡ ತುಂಬಾ ಜಾಸ್ತಿ  ಸುತ್ತಾಡುತ್ತಾ ರಂತೆ ಅದರಿಂದ ಅವರು  ಎಲ್ಲೆಲ್ಲಿ ಹೋಗಿದ್ದರು  ಅದೆಲ್ಲಾ ಕಥೆಗಳು ನಮ್ಮ ಟಿ ಟಿ ನಲ್ಲಿ ಶುರುವಾಗಿ, ನಮಗೆ ನಿದ್ರೆ ಇಲ್ಲದಂತಾಗಿ ..ಕಣ್ಣು ಮುಚ್ಚಿದರು ಕೂಡ ಅವರ ಮಾತುಗಳನ್ನು ಕೇಳಿಸಿಕೊಳ್ಳುವ ಅನಿವಾರ್ಯತೆ..... ಒಂದರ್ಧ ಗಂಟೆಯಲ್ಲಿ ಆಂಧ್ರಪ್ರದೇಶ ತಮಿಳುನಾಡು ಮಹಾರಾಷ್ಟ್ರ ಕರ್ನಾಟಕ ಗೋವಾ ಎಲ್ಲಾ ಗಡಿಗಳನ್ನು ದಾಟಿ ಸುತ್ತಿ ಬಂತು ಇವರ ಮಾತುಕತೆ...:-)

ಕುಪ್ಪಳ್ಳಿಯ ಪಕ್ಕ ಬೆನಕ ನೂರಿನ  ಸುಬ್ಬಣ್ಣನ ಮನೆ ತಲುಪಿದಾಗ ಆರು ಗಂಟೆ.. ಸಣ್ಣಗೆ ಬೀಳುತ್ತಿರುವ ಮಳೆಯಲ್ಲಿ ಎಲ್ಲರೂ ಕೂಡ ತಮ್ಮ ತಮ್ಮ ರೂಮುಗಳನ್ನು ಸೇರಿಕೊಂಡೆವು... ಮೊದಲೇ ಪ್ಲಾನ್ ಮಾಡಿದ್ದ ಹಾಗೆ ಆದಷ್ಟು ಬೇಗನೆ ಫ್ರೆಶ್ ಆಗಿ ಮುಂದಿನ ಸ್ಥಳಗಳಿಗೆ ಹೊರಡಬೇಕಿತ್ತು ಆದ ಕಾರಣ ಎಲ್ಲರಿಗೂ ಕೂಡ ಈಗ ಬರಬೇಕೆಂದು ಹೇಳಿದ್ದೆ.... ಕಾಫಿ ಬರುವುದು ಸ್ವಲ್ಪ ತಡವಾಯಿತು... ಆದರೂ ನಿಧಾನವಾಗಿ ಕಾಫಿ ಕುಡಿದು 7 :30 ಸುಮಾರಿಗೆ... ನಮ್ಮ ಮಳೆಗಾಲದ ನಡಿಗೆ ಶುರುವಾಯಿತು.. ಅಲ್ಲೇ ಪಕ್ಕದಲ್ಲಿ ಇರುವ ಕುವೆಂಪು ಅವರ ಮನೆ ಹಾಗೂ ಕವಿಶೈಲಕ್ಕೆ ಹೋಗಬೇಕೆಂದು ನಡೆದುಕೊಂಡೆ ಹೊರಟೆವು... ಸುಮಾರು ಒಂದು ಎರಡು ಕಿಲೋಮೀಟರ್ ಆಗಬಹುದು... ಕೈಯಲ್ಲಿ ಕೊಡೆ, ರೈನ್ ಕೋಟ್, ಎಂತಹ ಜೋರು  ಮಳೆ ಬಂದರೂ ಪರವಾಗಿಲ್ಲ ಎಂದು,,, ನಮ್ಮ ಪಯಣ ಹೊರಟಿತು , ಸುತ್ತಲೂ ಹಚ್ಚಹಸುರಿನ ಗಿಡ ಮರಗಳು ಯಾವ ಗದ್ದೆಗಳನ್ನುಕೂಡ ಬಿಡದೆ... ಎಲ್ಲೆಂದರಲ್ಲಿ ಚಿಕ್ಕ ಚಿಕ್ಕ ಝರಿಗಳಾಗಿ ಹರಿಯುತ್ತಿರುವ  ಜೋರು ಮಳೆ ನೀರು ..... ಎಲ್ಲಿ ನೋಡಿದರಲ್ಲಿ ನೀರೇ ನೀರು.... ಕುವೆಂಪುರವರ ಮನೆ ತಲುಪಲು ಒಂದಿಪ್ಪತ್ತು ನಿಮಿಷ ಬೇಕಾಯಿತು.... ಕುವೆಂಪುರವರ ಮನೆಯ ಸುತ್ತಮುತ್ತ ಸುತ್ತಾಡಿ ಕವಿಶೈಲದ ಹತ್ತಿರ ಸ್ವಲ್ಪ ಹೊತ್ತು ನಡೆದಾಡಿ ತಿಂಡಿ ತಿನ್ನಲು ಹೊತ್ತಾಗುತ್ತದೆ ಎಂದು ಬೇಗ ಬೇಗ ಬಂದೆವು.... ಸ್ನಾನ ಮುಗಿಸಿ ತಿಂಡಿ ತಿನ್ನುವಷ್ಟರಲ್ಲಿ 10.30 ಆಗಿತ್ತು... ಮಲೆನಾಡಿನ ಕಡಬು ಹಾಗೂ ಕಾಯಿ ಚಟ್ನಿ ತುಂಬಾ ಚೆನ್ನಾಗಿ ಮಾಡಿದ್ದರು ತಿಂಡಿ ತಿಂದು ಮತ್ತೊಂದು ಸಾರಿ ಕಾಫಿ ಕುಡಿದು ಅಲ್ಲಿಂದ ಮುಂದೆ ಹೊರಟಿತು  ನಮ್ಮ ಪಯಣ..

ಕಳೆದ ರಾತ್ರಿ ನಿದ್ದೆ ಇಲ್ಲದಿದ್ದರೂ ಕೂಡ ಮಲೆನಾಡಿನ ಅಹ್ಲಾದಕರ ವಾತಾವರಣವು ಎಲ್ಲರಲ್ಲೂ ಚೈತನ್ಯವನ್ನು ಉಂಟುಮಾಡಿತ್ತು.... ಅದೇ ಜೋಶ್ ನಲ್ಲಿ ಮುಂದೆ ಹೊರಟರು, ಮೊದಲು ಚೆಬ್ಬಿಲುಗುಡ್ಡ ಎನ್ನುವ ಒಂದು ದೇವಸ್ಥಾನ..

ದೇವಸ್ಥಾನದ ಹಿಂಭಾಗ ಹರಿಯುವ ತುಂಗಾನದಿಯಲ್ಲಿ ತುಂಬಾ ಮೀನುಗಳು ಇರುತ್ತವಂತೆ ಅದಕ್ಕೆ ಆಹಾರವನ್ನು ಕೊಡಬಹುದಾಗಿತ್ತು ಆದರೆ ತುಂಬಾ ಮಳೆಯ ಕಾರಣ ತುಂಗಾ ನದಿಯು ತುಂಬಾ ರಭಸವಾಗಿ ಹರಿಯುತ್ತಿದ್ದಳು... ಕೆಳಗೆ  ಇಳಿಯುವುದಿರಲಿ ... ಮೇಲೆ ನಿಂತು ನೋಡುವುದೇ ಒಂದು ಭಯಾನಕ  ದೃಶ್ಯವಾಗಿತ್ತು ....!! ಅಷ್ಟು ಜೋರಾಗಿ ರಭಸದಿಂದ ಹರಿಯುತ್ತಿದ್ದಳು ನಮ್ಮ ತುಂಗಾ ನದಿ, ಅಲ್ಲಿಂದ ಮುಂದೆ, ಭೀಮನಕಟ್ಟೆ ಎನ್ನುವ ಮತ್ತೊಂದು ಪ್ರೇಕ್ಷಣೀಯ ಸ್ಥಳಕ್ಕೆ ಹೊರಟೆವು ಮಧ್ಯದಲ್ಲಿ ತುಂಬಾ ಹಳೆಯದಾದ ಒಂದು ದೇವಸ್ಥಾನವೂ ಸಿಗುತ್ತದೆ, ಅದರಿಂದ ಮುಂದೆ ಒಂದು ಚಿಕ್ಕ ದೇವಸ್ಥಾನ ಅದೇ ಭೀಮನಕಟ್ಟೆ... ತೀರ್ಥಹಳ್ಳಿಯಿಂದ ಒಂದು 15ರಿಂದ 20 ಕಿಲೋಮೀಟರ್ ದೂರದಲ್ಲಿ ಇದೆ.. ಇಲ್ಲೂ ಕೂಡ ನೀರಿನಲ್ಲಿ ಆಟವಾಡಲು ಅವಕಾಶವಿತ್ತಾದರೂ ತುಂಬಾ ಮಳೆಯ ಕಾರಣ ಸಾಧ್ಯವಾಗಲಿಲ್ಲ ಅದೇ ತುಂಗಾ ನದಿಯು ಇನ್ನು ಜೋರಾಗಿ ಭೋರ್ಗರೆಯುತ್ತಾ  ಹರಿಯುತ್ತಾ  ಇದ್ದಳು.... ಇದರ ಸಮೀಪದಲ್ಲಿ ಒಂದು ತೂಗುಸೇತುವೆ ಇದೆ.. ಪಕ್ಕದಲ್ಲಿ ಹಳ್ಳಿ ಅವರಿಗೆ ಇದೇ ಆಧಾರ.... ತುಂಬಾ ಅದ್ಭುತವಾದ ತೂಗು ಸೇತುವೆ ಫೋಟೋಗ್ರಫಿಗೆ ಹೇಳಿಮಾಡಿಸಿದಂತಿತ್ತು... ನಮ್ಮ ತಂಡದವರು ಎಷ್ಟು ಫೋಟೋಗಳನ್ನು ತೆಗೆದುಕೊಂಡರೋ...  ತುಂಗಾ ನದಿಯ ರಭಸದ ನೀರಿನ ಸೆಳೆತ... ಮೇಲ್ಗಡೆ ಕಬ್ಬಿಣದ ತೂಗು ಸೇತುವೆ ಮನಮೋಹಕ ರುದ್ರ ರಮಣೀಯ ದೃಶ್ಯ, ಅದರಲ್ಲಿ ಬಿಟ್ಟು ಬಿಟ್ಟು ಬರುವ  ಮಳೆ ......  ಒಟ್ನಲ್ಲಿ   ಮಲೆನಾಡ ಮಳೆ ನಲ್ಲಿ ಒಳ್ಳೆ ಅನುಭವ..... :-)






ಮೊದಲೇ ತಂದಿದ್ದ ಮಧ್ಯಾನದ ಊಟವನ್ನು ಈ ತೂಗುಸೇತುವೆಯ ಸಮೀಪ, ಮಳೆಯಲ್ಲೇ ನೆನೆದು.... ತಿಂದೆವು ... ಹಾಗೆ ಬರುತ್ತಿರುವ ಮಳೆಯಲ್ಲೇ ಕೈ ತೊಳೆದು ........ ಅಲ್ಲಿಂದ ಹೊರಟಾಗ ಮಧ್ಯಾನ 1:30

......

ನಮ್ಮ ಮುಂದಿನ ಜಾಗ ಕವಲೇ ದುರ್ಗಾ ಎಂಬ ಕೋಟೆ...... ಇದರಲ್ಲಿ ಚಾರಣ ಮಾಡ ಬೇಕಿತ್ತು ...







ಕವಲೇದುರ್ಗ ಸಮೀಪ ಬರುತ್ತಾ ಇರುವಂತೆ... ಜೋರು ಮಳೆ..... ಒಂದು ಐದುನಿಮಿಷ ಕಾಯ್ದೆವು...... ಮಳೆ ನಿಲ್ಲುವ ಯಾವ ಲಕ್ಷಣಗಳು ಇಲ್ಲ..... ಅಲ್ಲೇ ಇರುವ ಅಂಗಡಿಯವರು ಹೇಳಿದರು.... ಬೇಗ ಹೋಗಿ ಬನ್ನಿ... ಇಲ್ಲ ಅಂದ್ರೆ ಸಂಜೆ ಮಳೆ ಇನ್ನು ಜೋರು ಇರುತ್ತೆ ಅಂತ.. ಸರಿ.... ನಾನು ನನ್ನ ಕ್ಯಾಮೆರಾ ವನ್ನು ತೆಗೆದು ಕೊಳ್ಳಲು ಮನಸ್ಸು ಮಾಡಲಿಲ್ಲ..... ಹೇಗಿದ್ದರೂ ಫೋನ್ ಇದೆ ಅದೇ ಸಾಕು ಅಂತ..... ಜೋರು ಮಳೆಯಲ್ಲೇ ನಮ್ಮ ಚಾರಣ ಶುರುವಾಯಿತು.......

ಬೆಟ್ಟದ ತಪ್ಪಲಿಗೆ ತಲುಪಲು ಒಂದು ಚಿಕ್ಕದಾದ ಹಸಿರು ಗೆದ್ದೆಯನ್ನು ಧಾಟಿ ಮುಂದೆ ಹೋಗಬೇಕು..... ಅಬ್ಬ... ಮಳೆಗೆ ಅ ಗದ್ದೆ...ಸಂಪೂರ್ಣ ಮುಳುಗಿತ್ತು..... ಪಕ್ಕದಲ್ಲೇ ಇರುವ ಒಂದು ಬಂಡೆ ಕಲ್ಲಿನ ಮೇಲೆನಿಂದ ಸಣ್ಣ ಝರಿ ....... ಗದ್ದೆಯ ತುಂಬೆಲ್ಲ ನೀರು...... ಮಳೆಯ ನೀರಿನ  ಸಪ್ಪಳ......ಸುತ್ತಲು ಇರುವ ಹಸಿರಿನ ವನಸಿರಿ..... ಅದನ್ನು ನೋಡಲು ಎರಡು ಕಣ್ಣು ಸಾಲದು.....

ಹಾಗೆ ಮುಂದೆ ಸಾಗಿದರೆ ನಾವು ನಡೆಯುವ ದಾರಿಯಲ್ಲೇ ಉತ್ಪತ್ತಿ ಯಾದ ಸಣ್ಣ ಸಣ್ಣ ನೀರಿನ ಹರಿವು  ಬೆಟ್ಟದ ಮೇಲಿನಿಂದ ಕೆಳಗೆ ಬರುತ್ತಾ ಇತ್ತು.... ಕಪ್ಪು ಕಲ್ಲುಗಳು.... ಮಳೆಯ ನೀರಿನ ದೆಸೆಯಿಂದ ಸಂಪೂರ್ಣ ಪಾಚಿ ಮಾಯಾ.... ಎಲ್ಲಿ ನೋಡಿದರಲ್ಲಿ ಹಚ್ಚ ಹಸುರಿನ ಪಾಚಿಗಳು..... ನಿದಾನವಾಗಿ ಬೆಟ್ಟ ಹತ್ತ ಬೇಕಾದ ಅನಿವಾರ್ಯತೆ.... ಅದರೆಲ್ಲಿ ನಮ್ಮ ಸಂಗಡ ಬಂದಿದ್ದ .... ಕೆಲ ಹೆಣ್ಣು ಮಕ್ಕಳು... ಕಾಲು ಇಡುವುದಕ್ಕೆ ಹೆದರುತ್ತ ಇದ್ದರು... ಅವರನ್ನು ಸಾಗು ಹಾಕಿಕೊಂಡು ಮುಂದೆ ಬರುವಷ್ಟರಲ್ಲಿ...... ಸಾಕಾಗಿತ್ತು.... :-)

ನಿಜವಾಗಲು ಒಮ್ಮೆ ಮಳೆಗಾಲದಲ್ಲಿ ಈ ಬೆಟ್ಟ ಹತ್ತಬೇಕು ಕಣ್ರೀ... ಅದ್ಬುತವಾದ ಅನುಭವ.....

" ಸಾಗುವ ದಾರಿಯಲ್ಲೇ ಸಿಗುವ ಚಿಕ್ಕ ಹಾಗು ದೊಡ್ಡ ಝರಿ ಗಳು... ನಮ್ಮ ಮಳೆ ಕಾಲದ ಸ್ನೇಹಿತರಾದ ಬಸವನ ಹುಳ. ಕಂಬಳಿ ಹುಳ.. ಜಿಗಣೆ..... ಚಿಕ್ಕ ಚಿಕ್ಕ ಮರಿ ಕಪ್ಪೆಗಳು..... ಅಬ್ಬ ಪ್ರಕೃತಿ ವಿಸ್ಮಯನ ಅನುಭವಿಸಿ ನೋಡಬೇಕು......."

ಕವಲೇ ದುರ್ಗದ ಬೆಟ್ಟದ ಮಧ್ಯದಲ್ಲಿ ಒಂದು ಪಾಳು ಬಿದ್ದ ಅರಮನೆ , ಹಳೇಯ ದೇಗುಲ, ನಂದಿ, ಇದೆ... ತುಂಬ ಚೆನ್ನಾಗಿ ಇದೆ.. ಬೆಟ್ಟದ ಪಾಳುಬಿದ್ದ ಅರಮನೆ ಮಧ್ಯ ಒಂದು ಕಲ್ಯಾಣಿ ಇದೆ.... ವಃ ಎಂಥ ಅದ್ಬುತವಾದ ಜಾಗ ಇದು.... ಆಗಿನ ಕಾಲದಲ್ಲಿಹೇಗೆ ಇದ್ದಿರ ಬಹುದು......

ಇದರ ಬಗ್ಗೆ ಒಂದು ಒಳ್ಳೆ ಇತಿಹಾಸ ವಿದೆ.... ಅದನ್ನು ಮತ್ತೊಮ್ಮೆ ಹೇಳುವೆ..

ಇಲ್ಲಿಂದ ಕೆಳಗೆ ಬಂದಾಗ ಸುಮಾರು ಆರು ಘಂಟೆ ಆಗಿತ್ತು... ಎಲ್ಲರೂ ನಡೆದಾಡಿ ಸುಸ್ತಾಗಿದ್ದರು.... ಸರಿ ಬೇರೆ ಎಲ್ಲೂ ಬೇಡ ಎಂದು ಕುಪ್ಪಳ್ಳಿಯ ಹೋಂ ಸ್ಟೇ ಕಡೆ ಹೊರಟೆವು... ಅಲ್ಲಿಗೆ ತಲುಪಿದಾಗ ೭ ಘಂಟೆ... ಕಾಫಿ ಕುಡಿದು... ನಾನು ಮತ್ತೆ ನಮ್ಮ ತಂಡದ ನವೀನ ನ ಜೊತೆ ಮ್ಯಾಕ್ರೋ ಫೋಟೋ ತೆಗೆಯೋಣ ಅಂತ ಪಕ್ಕದಲ್ಲಿ ಇದ್ದ ಅಡಿಕೆ ತೋಟಕ್ಕೆ ಹೊರಟೆವು..... ಹಾವು ಕಪ್ಪೆಗಳನ್ನು ಹಿಡಿಯಲು..... ಅದು ಕತ್ತಲಲ್ಲಿ... ಬರಿ ಟಾರ್ಚ್ ಲೈಟ್ ನಲ್ಲಿ..... ಮಜಾ ಇದೆ ಅಲ್ವ.... ಮಧ್ಯದಲ್ಲಿ ಎಲ್ಲಿ ಹಾವುಗಳು ಬರುತ್ತವೋ ಗೊತ್ತಿರೋಲ್ಲ.... ಆದರು ಒಂದು ಥರ ಮೊಂಡು ದೈರ್ಯ.... ನಮ್ಮ ಬ್ಯಾಡ್ ಲಕ್... ಹಾವುಗಳು ಸಿಗಲಿಲ್ಲ... ಆದರೆ ಕೆಲವೊಂದು ಕಪ್ಪೆಗಳು ಸಿಕ್ಕವು..... ವಾಪಸ್ ಬಂದು ಊಟ ಮಾಡಿ ಮಲಗುವ ಹೊತ್ತಿಗೆ ಹತ್ತು ವರೆ ಯಾಗಿತ್ತು...






ನಮ್ಮ ಪ್ರವಾಸದ ಸಂಪೂರ್ಣ ಕಿರು ಚಿತ್ರಣ ಇಲ್ಲಿದೆ ನೋಡಿ 




ಮುಂದಿನ ಲೇಖನದಲ್ಲಿ (ಕುಪ್ಪಳ್ಳಿ, ಕುಂದಾದ್ರಿ.. ಹಾಗು ಭದ್ರಾ ಜಲಾಶಯದ ಎರಡನೇ ದಿನದ ಮಾಹಿತಿ)