Monday, September 11, 2023

"ನಮ್ಮೂರ ಪರಿಸರ" – ನಮ್ಮ ಗ್ರಾಮ ಪರಿಸರ. ಕುಣಿಗಲ್

 "ನಮ್ಮೂರ ಪರಿಸರ" – ನಮ್ಮ ಗ್ರಾಮ ಪರಿಸರ.

ನಮ್ಮ "ಮಧುರಿಮಾ" ಥಿಯೇಟರ್ ಮತ್ತು "ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ" ಕುಣಿಗಲ್ ನಗರದಲ್ಲಿ 2023 ಸೆಪ್ಟೆಂಬರ್ 10 ರಂದು ನಡೆಸಲಾಗಿದ್ದ ಒಂದು ವಿಭಿನ್ನ ಕಾರ್ಯಕ್ರಮ ನಮ್ಮ ಊರು ಮತ್ತು ನಮ್ಮ ಪರಿಸರವನ್ನು ಆಚರಿಸಲಾಯಿತು.
ಮಕ್ಕಳನ್ನು ಪ್ರಕೃತಿಯ ಸಂಪರ್ಕಕ್ಕೆ ತಂದು ಪಕ್ಷಿ ರಕ್ಷಣೆ, ಚಿಟ್ಟೆಗಳು, ಮತ್ತು ಪರಿಸರದಲ್ಲಿ ಅವುಗಳ ಮುಖ್ಯ ಪಾತ್ರಗಳ ಬಗ್ಗೆ ಮಹತ್ವದ ವಿಚಾರ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿತ್ತು

ಕುಣಿಗಲ್ ತಾಲೂಕಿನಲ್ಲಿರುವ 2ನೇ ತರಗತಿಯಿಂದ 10ನೇ ತರಗತಿಯ ವಯೋಮಿತ್ರ ಪ್ರದೇಶದ 40 ಮಕ್ಕಳು ಈ ಸಂಭ್ರಮಕರ ಕಾರ್ಯಕ್ರಮಕ್ಕೆ ಉತ್ಸಾಹದಿಂದ ನಮೂದಿಸಿ ಈ ಅನನ್ಯ ಅನುಭವವನ್ನು ತುಂಬಾ ಆನಂದಿಸಿದರು.

ಮಕ್ಕಳು ಈ ಶಿಕ್ಷಣಕ್ಕೆ ಮತ್ತು ಪ್ರಕೃತಿಗೆ ಮೀಸಲಾದ ಈ ಕಾರ್ಯಕ್ರಮವನ್ನು ತುಂಬಾ ಆನಂದಿಸಿದ್ದು ಹಾಗು ಇದರ ಬಗ್ಗೆ ಹೆಚ್ಚು ಹೆಚ್ಚು ಪ್ರಶ್ನೆ ಕೇಳಿ ಪ್ರಕೃತಿ ಮಡಿಲಲ್ಲಿ ಆನಂದಿಸಿದ ರೀತಿ ನಮಗೂ ಬೆರಗು ನೀಡಿತ್ತು.. ಇಂತಹ ಪ್ರಯತ್ನಗಳು ಇಂದಿನ ಯುವ ತಲೆಮಾರಿಗೆ ಅತಿ ಅಗತ್ಯ ಪರಿಸರ ಮತ್ತು ಅದರ ಸಂರಕ್ಷಣೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ನಡೆಸುತ್ತವೆ, ಕೊನೆಗೂ ಹೆಚ್ಚಿನ ಸಾಕ್ಷರತೆಗೆ ಸಹಕರಿಸುತ್ತವೆ,
ಬರಿ ಕ್ಲಾಸ್ ರೂಮ್ ನಲ್ಲಿ ಕುಳಿತು ಪಕ್ಷಿ, ಗಿಡ ಮರ , ಚಿಟ್ಟೆ ಪ್ರಾಣಿಗಳ ಬಗ್ಗೆ ತೋರಿಸುವುದಲ್ಲ, ಮಕ್ಕಳಿಗೆ ಪರಿಸರದ ಬಗ್ಗೆ ಹೆಚ್ಚಿನ ಅರಿವು ಮೂಡಬೇಕು ಎಂದರೆ ಹೊರಗೆ ಇಂತಹ ಪರಿಸರದಲ್ಲಿ ನೆಡೆದಾಡಿ ಓಡಾಡಿ ಅನುಭವಿಸಿ ತಿಳಿದು ಕೊಳ್ಳ ಬೇಕು..

ನನ್ನ ಬಾಲ್ಯ ಸ್ನೇಹಿತ ಚಂದ್ರಮೌಳಿ 'ಮಧುರಿಮಾ ಥಿಯೇಟರ್' ನಲ್ಲಿ ಚಿಕ್ಕ ಮಕ್ಕಳಿಗಾಗಿ ರಂಗಶಿಬಿರ ಮತ್ತು ಇನ್ನು ಅನೇಕ ಕಾರ್ಯಕ್ರಮಗಳನ್ನು ಆಯೋಜಿ ಯಶಸ್ವಿ ಆಗಿದ್ದರೆ.
ಒಮ್ಮೆ ಇದರ ಬಗ್ಗೆ ಮಾತನಾಡುತ್ತ, ನನ್ನ ಹತ್ತಿರ ಒಂದು ಪ್ರಸ್ತಾಪ ಇಟ್ಟರು.. ನಾವೇಕೆ ಕುಣಿಗಲ್ ನಲ್ಲಿ ನೀನು ಆಯೋಜಿಸುವ ಪರಿಸರ, ಪಕ್ಷಿ ವೀಕ್ಷಣೆ ಕಾರ್ಯಕಮ ಮಾಡಬಾರದು ಎಂದು , ನಾನು ಹಿಂದೆ ಮುಂದೆ ನೋಡದೆ ತಕ್ಷಣವೇ ಒಪ್ಪಿಗೆ ನೀಡಿದ್ದೆ,, ಕಾರಣ ಕುಣಿಗಲ್ ನನ್ನ ಹುಟ್ಟುಸ್ಥಳವೂ ಆಗಿದೆ, ಹತ್ತನೇ ತರಗತಿಯವರೆಗೂ ನಾನು ಇಲ್ಲಿ ಅಧ್ಯಯನ ಮಾಡಿದ್ದೇನೆ. ನಾನು ಆಗಾಗ ಗ್ರಾಮೀಣ ಮಕ್ಕಳಿಗೆ ಪಕ್ಷಿ ಮತ್ತು ಪ್ರಕೃತಿಶಿಬಿರ ನಡೆಸುತ್ತೇನೆ, ಆದ್ದರಿಂದ ಈ ಅವಕಾಶ ಬಂದಾಗ ನಾನು ನನ್ನ ಸಹಮತ ನೀಡುವುದರಲ್ಲಿ ಸಂದೇಹವಿರಲಿಲ್ಲ

ನಾವು ಶೀಘ್ರದಲ್ಲೇ ದಿನಾಂಕವನ್ನು ಹೊಂದಿಸಿ, ಮಕ್ಕಳನ್ನು ಪ್ರಕೃತಿಯ ಸಂಪರ್ಕಕ್ಕೆ ಸಹಯೋಗ ಮಾಡಲು ಅಗತ್ಯ ವಿರುವ ಸಿದ್ಧತೆ ಮಾಡಿಕೊಳ್ಳಲು ಶುರುಮಾಡಿದೆವು..
ನಾನು ನಮಗೆ ಬೇಕಾದ ಸಹಾಯಕ್ಕಾಗಿ ನಮ್ಮ ಬೆಂಗಳೂರು ಪಕ್ಷಿ ಸಂಚಾಲನಾ ಗುಂಪಿಗೆ ನನ್ನ ಉತ್ಸಾಹವನ್ನು ಹೇಳಿದ ತಕ್ಷಣ ನಮ್ಮ ಟೀಮ್ ನ ವರಪ್ರಸಾದ್ , ಶಿವಂ, ವಿಜಯರಾಣಿ, ಮುನಿಷ್ ಗೌಡ, ರಕ್ಷಾ, ಅನುಪಮ, ಸೂರಿ ಮತ್ತು ನನ್ನ 12 ವರ್ಷದ ಮಗ ಪ್ರಣವ್ ಸಹ ಒಪ್ಪಿಗೆ ಸೂಚಿ ನಮ್ಮ ಜೊತೆ ಕೈಜೋಡಿಸಲು ಅನುವಾದರು.

ವಿಸ್ತಾರವಾದ ಸಿದ್ಧತೆಯೊಡನೆ, ನಾವು 2023 ಸೆಪ್ಟೆಂಬರ್ 10 ರಂದು ಬೆಳಿಗ್ಗೆಯ ಸಮಯಕ್ಕೆ ಈ ಕಾರ್ಯಕ್ರಮವನ್ನು ಮಾಡಲು ನಿರ್ಧರಿಸಿದ್ದೆವು.

"ನಮ್ಮ ಕುಣಿಗಲ್ . ಹತ್ತಿರದ ಪ್ರಕೃತಿಯ ವಿವಿಧತೆಯನ್ನು ಮತ್ತು ಪಕ್ಷಿ ಜೀವನವನ್ನು ಅನ್ವೇಷಿಸಲು . ನಾನು ಬೇಗುರು ಕೆರೆಗೆ ವೀಕ್ಷಿಸಲು ನಿರ್ಧರಿಸಿದೆವು , ಏಕೆಂದರೆ ಹಿಂದಿನ ಶಿಶಿರದಲ್ಲಿ ನಾನು ಈ ಕೆರೆಯಲ್ಲಿ ಅನೇಕ ವಲಸೆ ಪಕ್ಷಿಗಳನ್ನು ಗಮನಿಸಿದ್ದೆ "

"10ನೇ ತಾರೀಖು, ಆದಿತ್ಯಾಸ್ತಮನ್ನು ಸ್ವಾಗತಿಸುವ ಕೆರೆಯ ಹತ್ತಿರ ನಾವು ಬೆಂಗಳೂರಿನಿಂದ 5:30 ಗಂಟೆಗೆ ಹೊರಟು, 6:30 ಗಂಟೆಗೆ ಬೇಗುರು ಕೆರೆಯ ಹತ್ತಿರ ಬಂದೆವು.
ಶುಭ್ರ ಬೆಳಗಿನ ಸಮಯ, ಮೋಡ ಮಳೆ ಇರಲಿಲ್ಲ ಮತ್ತು ನಾವು ಕೆರೆಯ ಸುತ್ತಲೂ ಅಲ್ಲಿನ ಅದ್ಭುತ ದೃಶ್ಯಗಳನ್ನು ನೋಡಲು ಅಣುವಾಗಿದ್ದೆವು,
ಕೆರೆ ಹತ್ತಿರ ಸಾಮಾನ್ಯ ಇಲ್ಲೇ ವಾಸಿಸುವ ಹಕ್ಕಿಗಳ ಚಲನ ವಲನ ನೋಡುತ್ತಾ ಅವುಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾ ಮುಂದೆ ಸಾಗಿದೆವು, ಅಷ್ಟರಲ್ಲಿ ಏರಿ ಮೇಲಿನಿಂದ ಪಕ್ಕದ ಹೊಲ ಮತ್ತೆ ವಿಸ್ತಾರವಾದ ಗದ್ದೆ ಗಮನಿಸುತ್ತಾ ಇರಬೇಕಾದರೆ ನಮ್ಮ ತಂಡದ ಮುನೀಶ್ . ಜಾಕಲ್ ಅಂದರೆ ನರಿಗಳ ಗುಂಪನ್ನು ಪತ್ತೆ ಮಾಡಿ ಹೇಳಿದರು.. ಅಬ್ಬಬ್ಬಾ ನರಿ ನೋಡಿ ತುಂಬಾ ದಿನ ಆಗಿತ್ತು, ಒಂದು ಪೂರ್ಣ ನರಿಗಳ ಕುಟುಂಬ ಅಲ್ಲಿ ಬೆಳಗಿನ ಎಳೆ ಬಿಸಿಲಿನಲ್ಲಿ ಆಟ ಆಡುತ್ತ ಇದ್ದವು ... ಇದರ ಅಂದವನ್ನು ಕಣ್ಣು ತುಂಬಿಸಿ, ವಿಡಿಯೋ ಮತ್ತು ಫೋಟೋಗಳನ್ನು ಸೆರೆ ಹಿಡಿದು... ಮೂಢನೆ ಸಾಗಿದೇವು, ಅದರಲ್ಲಿ ಕೆಂಪು ಮುನಿಯಾ ಮತ್ತು ಇಬಿಸ್ ಪಕ್ಷಿಗಳ ಚಲನ ವಲನ ತುಂಬ ಖುಷಿ ಕೊಟ್ಟಿತು .


"ನಾವು 7:45 ಗಂಟೆಯವರೆಗೂ ನಮ್ಮ ಬೆಳಿಗ್ಗೆಯ ಪಕ್ಷಿ ವೀಕ್ಷಣೆ ಮುಕ್ತಾಯಗೊಳಿಸಿ, ಕುಣಿಗಲ್ಲಿ ನಲ್ಲಿ ಇರುವ 'ಹೋಟೆಲ್ ಪರಿಮಳ' ಎಂಬ ಶಾಕಾಹಾರಿ ಹೋಟೆಲ್ ಗೆ ಹೋದೆವು. ಇಲ್ಲಿ ನಮ್ಮತಂಡ ಬೆಣ್ಣೆ ಮಸಾಲ ದೋಸೆಯನ್ನು ಸ್ವಾದಿಸಿದೆವು. ಇದು ತುಂಬಾ ಹಳೆಯ ಹೋಟೆಲ್. ಈ ಹೋಟೆಲ್ ನೋಡುತ್ತಾ ಇಲ್ಲಿ ತಿಂಡಿ ತಿನ್ನುತ್ತಾ ನನ್ನ ಬಾಲ್ಯ ನೆನಪುಗಳ ಕಣ್ಣ ಮುಂದೆ ಬಂದವು.. ಈ ಹೋಟೆಲ್ ಇವಾಗ ಸ್ವಲ್ಪ ಬದಲಾಗಿದೆ...ಆಧುನಿಕತೆಗೆ ಇಂದಿನ ಸನ್ನಿವೇಶಕ್ಕೆ ಬದಲಾಗಿ ತನ್ನ ಅಂದ ಇನ್ನು ಹೆಚ್ಚಿಸಿ ಕೊಂಡಿದೆ. ಆದರೂ ಇಲ್ಲಿನ ಟೇಸ್ಟ್ ಮಾತ್ರ ಬದಲಾಗಿ ಇಲ್ಲ. ಅದೇ ಸ್ವಾದ... ಹೋಟೆಲ್ ಕಿಕ್ಕಿರಿದು ತುಂಬಿತ್ತು.


ಬೇಗ ಬೇಗ ತಿಂಡಿ ಮುಗಿಸಿ ಯೋಗ ಮಂದಿರ ಕ್ಕೆ ಬಂದೆವು... ಎಲ್ಲ ಮಕ್ಕಳು ಮೊದಲೇ ಸೇರಿ ಈ ಕಾರ್ಯಕ್ರಮಕ್ಕೆ ಎದಿರು ನೋಡುತ್ತಾ ಇದ್ದರು. ಸುಮಾರು ೪೦ ಜನ ಮಕ್ಕಳು ಎರಡನೇ ತರಗತಿ ಇಂದ ಹತ್ತನೇ ತರಗತಿ ವರಗೆ ಕುತೂಹಲದಿಂದ ಕಾಯುತ್ತ ಇದ್ದರು....
ನಮ್ಮ ಕಿರು ಪರಿಚಯ ಮುಗಿಸಿ ಮೊದಲ ಹಂತದ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟೆವು...
ಯೋಗ ಮಂದಿರ ದಿಂದ ಸುಮಾರು ೧.೫ km ದೂರ ಇರುವ "ಗಂಗೇನ ಹಳ್ಳಿ ಬಯಲು ಪ್ರದೇಶಕ್ಕೆ" ನಮ್ಮ ಗುಂಪು ಗುಂಪಾಗಿ ಹೊರಟಿತು... ಹೋಗುವ ದಾರಿ ಹೇಗೆ ಇತ್ತು ಎಂದರೆ ತೋಟ ಮತ್ತು ಹೊಲಗಳ ಮದ್ಯೆ ನಮ್ಮ ಪ್ರಯಾಣ ಸಾಗಿತ್ತು.. ದಾರಿ ಉದ್ದಕ್ಕೂ ಸಿಗುವ, ಪಕ್ಷಿಗಳ ಮತ್ತು ಚಿಟ್ಟೆಗಳ ಪರಿಚಯ ಮಾಡಿಕೊಳ್ಳುತ್ತ ಸಾಗಿತ್ತು ನಮ್ಮ ಪಯಣ.











ಕೆಲವು ಮಕ್ಕಳು ಮೊದಲನೇ ಸಲ ಬೈನಾಕ್ಯುಲರ್ ನೋಡುತ್ತಾ ಇದ್ದರು.. ತುಂಬ ಹತ್ತಿರದಿಂದ ನವಿಲು, ಬುಲ್ಬುಲ್, ಮೈನ ಇವುಗಳ ದರ್ಶನ ಮಾಡಿ ಖುಷಿ ಪಟ್ಟರು... ತಾರಾ ತರಹದ ಪ್ರಶ್ನೆಗಳನ್ನು ಕೇಳುತ್ತ ನೋಟ್ ಬುಕ್ ನಲ್ಲಿ ಅದರ ಬಗ್ಗೆ ಕೇಳಿ ಮಾಹಿತಿ ಬರೆದು ಕೊಳ್ಳುತ್ತಾ ಸಾಗಿದೆವು,, ಒಂದೂವರೆ ಕಿಲೋಮೀಟರ್ ಹೇಗೆ ಸಾಗಿತ್ತೋ ಗೊತ್ತಾಗಲಿಲ್ಲ ....ಬಣ್ಣ ಬಣ್ಣದ ಚಿಟ್ಟೆ, ಪಕ್ಷಿ, ನವಿಲು....ಹಾವು, ಹೂವ ಮತ್ತು ಗಿಡಗಳ ಪರಿಚಯ ಮಾಡಿಕೂಳ್ಳತ್ತ ಹೋದೆವು.
ಗಂಗೇನ ಹಳ್ಳಿ ಬಯಲು .. 
ಗಂಗ ಸಾಮ್ರಾಜ್ಯದ ಕುರುಹು ಗಳು ಇರುವ ಜಾಗ,, ಇಲ್ಲಿ ಇರುವ ದೇವಸ್ಥಾನ ಪೂರ್ತಿ ಬಿದ್ದು ಹೋಗಿದೆ.. ಆದರೂ ಇಲ್ಲಿನ ಜನ ಹೊಸ ದೇವಸ್ಥಾನ ಕಟ್ಟಿದ್ದಾರೆ.. ಸುಂದರ ಶಿವಲಿಂಗ ಮತ್ತು ಬಸವಣ್ಣ ಸಾವಿರಾರು ವರ್ಷಗಳ ಇತಿಹಾಸ ಹೇಳುತ್ತಾ ಇತ್ತು.. ಪಕ್ಕದಲ್ಲೇ ಇರುವ ವೀರಗಲ್ಲು ಮತ್ತು ಮಾಸ್ತಿ ಗಲ್ಲು ಇತಿಹಾಸದ ದರ್ಶನ ಮಾಡಿಸುತ್ತ ಇತ್ತು.. 
 ಇದರ ಜೊತೆಗೆ ಸುಂದರ ಹಳದಿ ಹೂವಿನ ಸೇವಂತಿಗೆ ಹೂವು ಇಲ್ಲಿನ ಪರಿಸರದ ಕಳೆ ಹೆಚ್ಚಿಸಿತ್ತು..

ದೇವಸ್ಥಾನದ ಪಕ್ಕದಲ್ಲೇ ಇರುವ ಮರದ ಕೆಳಗೆ ಮಕ್ಕಳಿಗೆ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.. ಹಾಗೆ ಇಲ್ಲಿನ ಸ್ಥಳ ಪರಿಚಯ ಮಾಡಿಕೊಂಡು ವಿಚಾರ ವಿನಿಮಯ ಮಾಡಿಕೊಂಡೆವು..

ತದನಂತರ ಮತ್ತೆ ಬಂದ ದಾರಿಯಲ್ಲೇ ಸಾಗಿ ಯೋಗ ಮಂದಿರಕ್ಕೆ ಬಂದೆವು..  ಮತ್ತೊಮೆ ಹೊಸ ಹೊಸ ಪಕ್ಷಿ ಮತ್ತು ಚಿಟ್ಟೆಗಳ ಪರಿಚಯ ಮಾಗೆ ಹಾವುಗಳ ಓಡಾಟ ಕಾಣ ಸಿಕ್ಕಿತ್ತು..
ಯೋಗ ಮಂದಿರದಲ್ಲಿ ಚಿಕ್ಕ ಮಕ್ಕಳಿಗೆ ಪಕ್ಷಿ ಮತ್ತು ಪರಿಸರದ ಬಗ್ಗೆ ಕೆಲವು ಗೇಮ್ಸ್ ಅನ್ನು ಆಡಿಸಿ . ಒಂದು ಪುಟ್ಟ ಪರಿಸರ ಪಕ್ಷಿಗಳ ಬಗ್ಗೆ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಇನ್ನು ಕುತೂಹಲ ಮೂಡಿಸುತ್ತು..
ಇದಾದ ನಂತರ ಈ ದಿನದ ನೆನಪಿಗಾಗಿ "ಕದಂಬ ವೃಕ್ಷ " ಸಸ್ಯ ನೆಟ್ಟು  ಈ ದಿನದ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಮೆರಗು ನೀಡಿತ್ತು..
ಚಿಕ್ಕ ಮತ್ತು ಚೊಕ್ಕ ಊಟ ನಂತರ,  ಇಂದಿಂದ ಕಾರ್ಯಕಮದ ಬಗ್ಗೆ ಅಭಿಪ್ರಾಯ ಮತ್ತು ವಂದನಾರ್ಪಣೆ ಇತ್ತು.


ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷರಾದ ಶ್ರೀ ರಾಮಣ್ಣ ಅವರ ಅರ್ಥಪೂರ್ಣ ಅನಿಸಿಕೆ ಮತ್ತು ಮಾತು ಮನಮುಟ್ಟುವಂತೆ ಇತ್ತು.. ಇವರು ನಿವೃತ್ತ ಕನ್ನಡ ಶಿಕ್ಷಕರು ಕೂಡ ... ಇವರ ಮಾತಿನಲ್ಲಿ ತೂಕ ಮತ್ತು ಅರ್ಥಪೂರ್ಣ ಅಭಿಪ್ರಾಯ ಎಲ್ಲರನ್ನು ಮತ್ತೆ ಯೋಚಿಸುವ ಹಾಗೆ ಮಾಡಿತ್ತು..



ಈ ಶಿಬಿರದಲ್ಲಿ ಪಾಲ್ಗೊಂಡಿದ್ದ ಕೆಲವು ಮಕ್ಕಳ ಅಭಿಪ್ರಾಯ " ಸಾಮಾನ್ಯ ವಾಗಿ ಭಾನುವಾರ ಟಿವಿ ಮತ್ತು ಮೊಬೈಲ್ ನೋಡಿಕೊಂಡು ಟೈಮ್ ವೇಸ್ಟ್ ಮಾಡುತ್ತ ಇದ್ದ ನಾವು , ಇಂದಿನ ಕಾರ್ಯಕ್ರಮದಲ್ಲಿ ಪರಿಸರ ಪಕ್ಷಿಗಳು ಮತ್ತು ಚಿಟ್ಟೆಗಳ ಪ್ರತ್ಯಕ್ಷ ದರ್ಶನ ಮಾಡಿ, ಎಂತಹ ಅಮೂಲ್ಯ ಸಮಯ ಸದುಪಯೋಗ ಪಡಿಸಿಕೊಂಡೆವು ಎಂದು ಹೇಳುವಾಗ " ನಮ್ಮ ಈ ಕಾರ್ಯಕ್ರಮದ ಸಾರ್ಥಕತೆ , ಯಶಸ್ವಿ ನಮ್ಮ ನ್ನು ಇನ್ನು ಎತ್ತರಕ್ಕೆ ಏರಿಸಿದ್ದೆವು ..
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಚಾಲಕರು ಅರುಣ್ ಅಣ್ಣ ತುಂಬ ಮುತುವರ್ಜಿ ವಹಿಸಿ, ಊಟ ತಿಂಡಿ ವ್ಯವಸ್ಥೆ ಅಚ್ಚು ಕಟ್ಟಾಗಿ ಮಾಡಿದ್ದರು ..

ಕೊನೆಯದಾಗಿ, "ಮಧುರಿಮಾ" ಥಿಯೇಟರ್" ನ ಶ್ರೀ ಯುತ ಚಂದ್ರಮೌಳಿ ಇಂತಹ ಹೊಸ ಹೊಸ ಪ್ರಯೋಗ ಗಳಿಗೆ ಮುನ್ನುಡಿ ಬರೆದು... ಇಷ್ಟು ಅಚ್ಚು ಕಟ್ಟಾಗಿ ನಿರ್ವಹಣೆ ಮಾಡಿದ್ದಕ್ಕೆ ನಮ್ಮ ಕಡೆ ಇಂದ ಒಂದು ದೊಡ್ಡ ಪ್ರಣಾಮಗಳು...


Special thanks to https://www.early-bird.in/. for Beautiful Kannada Posters and Flashcards and presentation


ಗುರುಪ್ರಸಾದ್ 
9886286681
guru.prasadkr@gmail.com

 Please watch Event photos here. 

1 comment:

  1. Very well articulated Guru. Appreciate the initiatives that you take

    ReplyDelete