Friday, June 3, 2022

ನಾನು ಮಲ್ಲತಳ್ಳಿ ಕೆರೆ

 




ಆತ್ಮೀಯ ಓದಿರುವ ನಾಗರಿಕ ಸಮಾಜದ ಸತ್ ಪ್ರಜೆಗಳೇ .....
ನಾನು ಬೆಂಗಳೂರಿನ ನಾಗರಬಾವಿ ಸಮೀಪ ಇರುವ ಒಂದು ಕೆರೆ...  ಒಂದು ಕಾಲದಲ್ಲಿ ನೂರಾರು ಕೆರೆಗಳ ನಗರ ಎಂಬಂತೆ ಇದ್ದ ನಮ್ಮ ಬೆಂಗಳೂರಿನ ಹೆಮ್ಮೆಯ ಕೆರೆ ಯಲ್ಲಿ ನನ್ನ ಹೆಸರು ಕೂಡ ಇತ್ತು...
ಇಲ್ಲಿನ ಕಾಂಕ್ರೀಟ್ ಬಡಾವಣೆ ಬರುವ ಮುನ್ನ ಮಳೆಯ ನೀರನ್ನು ಹಿಡಿದು ಕೊಂಡು ನೂರಾರು ಎಕರೆ ವಿಸ್ತೀರ್ಣದ ತೋಟ ಗದ್ದೆಗಳಿಗೆ ನೀರು ಕೊಡುತ್ತಾ ಇದ್ದೆ....
ಆಮೇಲೆ ಬಿಡಿ ಎಲ್ಲಿ ಗದ್ದೆ ತೋಟ..... ಎಲ್ಲಾ ಕಾಂಕ್ರೀಟ್ ಮಯ......
ಮಳೆಗಾಲದಲ್ಲಿ ಇದ್ದ ಕೆಲವು ಮಳೆ ನೀರು ಹರಿಯುವ ಜಾಗಗಳನ್ನು ಅತಿಕ್ರಮ ಮಾಡಿ ನಿಮ್ಮ ನಿಮ್ಮ ಮೋರಿ ನೀರು ಹರಿಯುವಂತೆ ಮಾಡಿದಿರಿ..... ಹೋಗಲಿ ಬಿಡಿ.. ಅದೇ ನೀರನ್ನು ಅವಲಂಬಿಸಿ ಮೀನು, ಕಪ್ಪೆ, ಹಾವು, ಹಾಗೂ ಅನೇಕ ಪಕ್ಷಿ ಸಂಕುಲ ನನ್ನ ಒಡಲಿನಲ್ಲಿ ಇದ್ದವು
ತೀರಾ ಇತ್ತೀಚೆಗೆ ನನ್ನ ಮಡಿಲಿಗೆ ನೂರಾರು ವಲಸೆ ಪಕ್ಷಿ ಬಂದು ಹೋಗುತ್ತಾ ಇದ್ದವು....
ಆದರೆ😔😔.   ಕಳೆದ ಒಂದು ವರ್ಷದಿಂದ .....ನನ್ನ ಮೇಲೆ ಯಾವ ರೀತಿ ಹಾನಿ ಮಾಡುತ್ತಾ ಇದ್ದೀರಾ ಗೊತ್ತಾ.....
ಬೇರೆ ಮಣ್ಣು ತಂದು ಸುರಿದು ನನ್ನ ದೊಡ್ಡ ದಾದ ವಿಸ್ತೀರ್ಣವಾದ ಜಾಗ ವನ್ನು ಇನ್ನೂ ಕಿರಿದು ಮಾಡುತ್ತಾ.....  ಬರೀ ಚರಂಡಿ ನೀರು ತುಂಬುವ ಕೊಚ್ಚೆ ಗುಂಡಿ ಮಾಡುತ್ತಾ ಇದ್ದೀರಿ.....
ಕಳೆದ ಕೆಲವು ವರ್ಷಗಳ ವರೆಗೂ ಇಲ್ಲಿ ಬರುತ್ತಿದ್ದ ಕುರಿ ಮೇಕೆ , ದನ, ಹಾಗೂ ನಾಯಿ ನೀರು ಕುಡಿತ ಇದ್ದವು... ಆದರೆ ಈಗ.... ಛೇ ಇಲ್ಲಿನ ವಾಸನೆಗು ಯಾವ ಪ್ರಾಣಿ ಕೂಡ ಬರೋಲ್ಲ.......
ಆದರೆ ನಿಮಗೆ ಅಂದರೆ ಮನುಷ್ಯ ಪ್ರಾಣಿ ಗೆ ಮಾತ್ರ ಕೊಚ್ಚೆ ಗುಂಡಿ ಮಾಡಿರುವ ಕೆರೆಯ ಮೇಲೆ ... ನೆಡಿಗೆ ಪಥ ಮಾಡಿಕೊಂಡು.... ವಾಕಿಂಗ್ ಮಾಡಬೇಕು....  ಇನ್ನು ಕೆಲವು ಜನಗಳಿಗೆ ಮದ್ಯ ಕುಡಿಯಲು ಹಾಳು ಮಾಡಲು ಒಂದಷ್ಟು ಜಾಗ ಬೇಕು.......
ದಿಕ್ಕಾರ ವಿರಲಿ ನಿಮ್ಮ ಅಭಿವೃದ್ದಿ ಹೆಸರಿನಲ್ಲಿ ಇರುವ ಜಾಗವನ್ನು ಆಕ್ರಮಿಸಿಕೊಂಡು ಹಾಳು ಮಾಡುತ್ತದೆ ಇರುವುದಕ್ಕೆ....
ಅಲ್ಲ ರಾಜಕಾರಣಿ ಗಳಿಗೆ , ಅಭಿವೃದ್ದಿ ಹೆಸರಿನಲ್ಲಿ ದುಡ್ಡು ಮಾಡುವ ಜನರಿಗೆ  ಬುದ್ದಿ ಇಲ್ಲ ಅಂದರೆ ಅವರನ್ನು ಆರಿಸಿ ಕಳುಹಿಸಿದ ನಿಮಗೂ ಬುದ್ದಿ ಇಲ್ವಾ..  ಈ ಕೆರೆಯನ್ನು ಉಳಿಸಬೇಕು ಅಂತ ಅನ್ನಿಸಿಲ್ವಾ......
ಸರಿ ಬಿಡಿ.......ನಾವು ಇಲ್ಲ ಅಂದರೆ ನೀವು ಇನ್ನೆಷ್ಟು ದಿನ ಬದುಕುತ್ತೀರ ನೋಡೋಣ.... 😔😔😔😔😔
ನೊಂದ ಮಲ್ಲತಳ್ಳಿ ಕೆರೆ

1 comment:

  1. I totally agree with you
    I have been visitng this lake since 2000 and seen how the lake is getting destroyed in the name of its development wasting taxpayers 'money

    ReplyDelete