Sunday, November 30, 2014

IT ಕಂಪನಿ ಯಲ್ಲಿ ಕನ್ನಡ ರಾಜ್ಯೋತ್ಸವದ ಕಲರವ

ನಮ್ಮ ಕಂಪನಿ  ಯಲ್ಲಿ  ಕನ್ನಡ  ರಾಜ್ಯೋತ್ಸವದ ಕಲರವ  ..... ನಮ್ಮ ಕಂಪನಿ ನಲ್ಲಿ ಕನ್ನಡ ಗೆಳೆಯರ ಬಳಗದವರು ೮ ನೆ ವರುಷದ ಅದ್ದೂರಿ ಕನ್ನಡ ರಾಜ್ಯೋತ್ಸವ ವನ್ನು ಇತ್ತೀಚಿಗೆ ಅಚರಿಸಿದರು...ವರುಷ ದಿಂದ ವರುಷಕ್ಕೆ ನಮ್ಮ ಕನ್ನಡ ರಾಜ್ಯೋತ್ಸವದ ಹಬ್ಬ ಇಮ್ಮಡಿ ಗೊಳ್ಳುತ್ತಿದೆ , ಬರಿ ಕನ್ನಡ ಅಥವಾ ಕರ್ನಾಟಕದ ಸಹದ್ಯೋಗಿಗಳು ಮಾತ್ರವಲ್ಲದೆ, ಬೇರೆ ಬೇರೆ ರಾಜ್ಯಗಳಿಂದ ಬಂದ ಸಹದ್ಯೋಗಿ ಮಿತ್ರರು ಪಾಲ್ಗೊಂಡು ನಮ್ಮ ನಾಡಿನ ಹಬ್ಬದಲ್ಲಿ ಮಿಂದು ಖುಷಿ ಪಟ್ಟರು , 

ಡೊಳ್ಳು ಕುಣಿತ , ವೀರ ಗಾಸೆ, ದೇವರ ಕುಣಿತ ಇವುಗಳಿಂದ ಶುರುವಾಗಿ ಕಾರ್ಯಕ್ರಮಕ್ಕೆ ಮೆರಗು ತಂದು ಕೊಟ್ಟಿತ್ತು ಈ ಸಾರಿ, ನಮ್ಮ ಹಾಸ್ಯ ನಟ ಮಿಮಿಕ್ರಿ ದಯಾನಂದ್ ಅವರ ನಗೆ ಕಚಗುಳಿ ಬಲು ಜೋರಿತ್ತು.. ಎಲ್ಲರೂ ಬಿದ್ದು ಬಿದ್ದು ನಕ್ಕಿ ಸುಸ್ತಾದರು, ಈ ವರುಷದ ಇನ್ನೊಂದು ವಿಶೇಷ ಏನು ಅಂದರೆ ನಮ್ಮ ಕಂಪನಿಯ ಹುಡುಗರು ಮತ್ತೆ ಹೊರಗಿನವು ಸೇರಿಕೊಂಡು ಮಾಡಿದ ಯಕ್ಷಗಾನ.. ಅದ್ಬುತ ತುಂಬ ಚೆನ್ನಾಗಿ ಮೂಡಿ ಬಂದಿತ್ತು , ಅದಾದ ಮೇಲೆ ಭರತನಾಟ್ಯ, ನಾಟಕ .. ಎಲ್ಲವೂ ಗಮನ ಸೆಳೆದವು, ಒಟ್ಟಿನಲ್ಲಿ ಒಂದು ಒಳ್ಳೆಯ ಕನ್ನಡ ಕಾರ್ಯಕ್ರಮ .... ಹಾಗೆ,ನಮ್ಮ ಕಂಪನಿ ನಲ್ಲಿ ಕೆಲಸ ಮಾಡಿಕೊಂಡು ಸಿನಿಮಾ ನಟನೆಯಲ್ಲಿ ಮಿಂಚುತ್ತಿರುವ ಯುವ ನಾಯಕ ನಟ ಪ್ರತಾಪ್ ನಾರಾಯಣ್ ಅವರು ಸಹ ತಮ್ಮ ಹೊಸ ಸಿನಿಮಾ "ಬೆಂಕಿಪೊಟ್ಟಣ" ದ ಬಗ್ಗೆ ಒಂದೆರಡು ಮಾತಾಡಿದರು .. ಒಬ್ಬ ಯುವ ನಾಯಕ ನಟ ನಮ್ಮ ಜೊತೆ ಇರುವುದೇ ನಮಗೆಲ್ಲ ಸಂತೋಷದ ವಿಷಯ , ಇಂಥ ಒಂದು ಕಾರ್ಯಕ್ರಮಕ್ಕೆ ನಮ್ಮ ಕಂಪನಿಯ ಆಡಳಿತ ಮಂಡಳಿಯಾ ಪ್ರೋತ್ಸಾಹಕ್ಕೆ ಅಭಿನಂದನೆಗಳು .. ಹಾಗು ಕಾರ್ಯಕ್ರಮಕ್ಕೆ ಒಂದು ತಿಂಗಳು ಮುಂಚಿನಿಂದ ಎಲ್ಲರನು ಒಟ್ಟುಗೂಡಿಸಿ, ಕಾರ್ಯಕ್ರಮದ ರೂಪು ರೇಷೆ ಗಳನ್ನೂ ಸಿದ್ದಪಡಿಸಿ ಎಲ್ಲರೂ ಸಂಬ್ರಮಿಸುವಂತೆ ಮಾಡಿದ ನಮ್ಮ ಕಂಪನಿಯ ಕನ್ನಡ ಬಳಗದ ಗೆಳೆಯರಾದ ನಾಗೇಶ್ ಪ್ರಭುಸ್ವಾಮಿ, ಮಾಹೇಶ್ ಕೋರ , ಹರೀಶ್, ಮನು ಗೌಡ, ಲಕ್ಷ್ಮಿ ಸಿದ್ದಪ್ಪ, ರಾಜ್ ವಿನೋದ್ ಗೌಡ, ಅಭಿಜಿತ್, ಹಾಗು ಎಲ್ಲ ಗೆಳೆಯರಿಗೂ ಅಭಿನಂದನೆಗಳು .....



























2 comments:

  1. ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮಗೆ ಹಾಗು ನಿಮ್ಮ ಕಂಪನಿಗೆ ಶುಭಾಶಯಗಳು

    ReplyDelete
  2. ಧನ್ಯವಾದಗಳು ಸುನಾಥ ಸರ್

    ReplyDelete